Advertisement

ಸುಬ್ರಹ್ಮಣ್ಯ : ಹೊಳೆಗೆ ಬಿದ್ದು ಇಬ್ಬರು ದಾರುಣವಾಗಿ‌ ಸಾವನಪ್ಪಿರುವ ದುರ್ಘಟನೆ ಮಂಗಳವಾರ ತಡ ರಾತ್ರಿ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಏನೇಕಲ್‌ ಎಂಬಲ್ಲಿ ನಡೆದಿದೆ. ಮೃತರನ್ನು ಧರ್ಮ ಪಾಲ ( ೪೬) ಹಾಗೂ ಬೆಳ್ಯಪ್ಪ ಚಳ್ಳಂಗಾರು ಚೊಕ್ಕಾಡಿ (೪೯) ಎಂದು‌ ಗುರುತಿಸಲಾಗಿದೆ. ಮೃತರಪಟ್ಟವರ ಪೈಕಿ ಧರ್ಮಪಾಲ ಎಂಬುವವರು ಏನೇಕಲ್ ನ ಕಸ ವಿಲೇವಾರಿ ಘಟಕದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ಹೊಳೆಯಲ್ಲಿ ಪಂಪಿನ್ ಫೂಟ್ ವಾಲ್ ತೆಗೆಯುವುದಕ್ಕೆ ನೀರಿನಲ್ಲಿ ಇಳಿದಾಗ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಇಬ್ಬರ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ