ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ 9ನೇ ತರಗತಿ ವಿದ್ಯಾರ್ಥಿನಿ ದೀಪ್ತಿ ಕೆ ಸಿ, ಪ್ರೌಢಶಾಲಾ ವಿಭಾಗದ 3000 ಮತ್ತು 1500 ಮೀ ಓಟದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಕೆ ಪಿ ಎಸ್ ಬೆಳ್ಳಾರೆಯಲ್ಲಿ ನಡೆದ ತಾಲೂಕು ಮಟ್ಟದ 3000ಮೀ ದ್ವಿತೀಯ ಹಾಗೂ 1500 ಮೀ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಯಾಗಿದ್ದರು ನಂತರ ಮಂಗಳೂರಿನ ಮಂಗಳ ಸ್ಟೇಡಿಯಂ ನಲ್ಲಿ ನಡೆದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ 3000 ಮೀ ಓಟದ ಸ್ಪರ್ಧೆಯಲ್ಲಿ ಪ್ರಥಮ 1500ಮೀ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಕಾಸ್ಪಾಡಿ ಚಿನ್ನಪ್ಪ ಕೆ ಕೆ ಹಾಗೂ ಲಕ್ಷ್ಮಿ ದಂಪತಿಯ ದ್ವಿತೀಯ ಪುತ್ರಿ ಇವರಿಗೆ ಪ್ರಾಪ್ತಿ ಕೆ ಸಿ ಮತ್ತು ಧೃತಿ ಕೆ ಸಿ ಇಬ್ಬರು ಸಹೋದರಿಯರು ಇದ್ದಾರೆ. ಇವರಿಗೆ ಮುಖ್ಯ ಗುರುಗಳಾದ ಎಂ ಕೆ ಸೀತಾರಾಮರವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಜಯರಾಮ ಪೆರುಮುಂಡ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀಮತಿ ಶಾಂತಿ ಎ ಕೆ ತರಬೇತಿ ನೀಡಿರದ್ದಾರೆ, ಶಿಕ್ಷರಾದ ಮನೋಜ್ ಉಳುವಾರು ಹಾಗೂ ಸಂದೇಶ್ ಅಡ್ಕಾರ್ ಸಹಕರಿಸಿದ್ದಾರೆ ಪ್ರಸ್ತುತ ಇವರು ಅರಂತೋಡು ಗ್ರಾಮದ ಅಡ್ತಲೆಯಲ್ಲಿ ವಾಸವಾಗಿದ್ದಾರೆ.
