Advertisement
ಸುಳ್ಯ: ಪರಪ್ಪೆ ಬಳಿ ಮದುವೆ ದಿಬ್ಬಣ ಹೋಗುತ್ತಿದ್ದ ಸಂಧರ್ಭ ಇನೋವಾ ಕಾರೊಂದು ಸ್ಕಿಡ್ ಆಗಿ ಪಲ್ಟಿ ಹೊಡೆದ ಪರಿಣಾಮ ರಸ್ತೆ ಬದಿಯ ಮರಕ್ಕೆ ಹೊಡೆದು ಸಿಲುಕಿ ಹಾಕಿಕೊಂಡಿದೆ. ಕಾರಿನಲ್ಲಿದ್ದ, ಗೊಳಿತ್ತಾಡಿ ತೆಂಗಿನಕಾಯಿ ವ್ಯಾಪಾರಿಯಾದ ಶಾನುರವರ ಹೆಂಡತಿ, (ಸುಳ್ಯ ಮೂಲದ ಮಹಿಳೆ) ಮತ್ತು ಮಗು ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತದಲ್ಲಿ ನಾಲ್ವರು ತೀವ್ರ ಜಖಂಗೊಂಡ ಘಟನೆ ನಡೆದಿದೆ. ಮೃತಪಟ್ಟ ಮಹಿಳೆ ಹಾಗೂ ಮಗುವಿನ ಮೃತದೇಹ ಸುಳ್ಯ ಕೆ.ವಿ.ಜಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

Advertisement