Advertisement

ಭಜನೆ, ಭಜಕರ ವಿರುದ್ಧ ಅಶ್ಲೀಲವಾಗಿ ಬೇಕಾಬಿಟ್ಟಿ ಬರಹ ಬರೆದು ಹಿಂದೂ ಸಮಾಜದ ಕೆಂಗಣ್ಣಿಗೆ ಗುರಿಯಾದ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಮೇಲೆ ಕೇಸು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಎಡಮಂಗಲ ವಿ.ಹಿಂ.ಪ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ವತಿಯಿಂದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಎಡಮಂಗಲ ವಿ.ಹಿಂ.ಪ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಇದರ ಗೌರವಾಧ್ಯಕ್ಷರಾದ ಗಿರೀಶ್ ನಡುಬೈಲು, ಪ್ರಖಂಡ ಸಹ ಸಂಯೋಜಕ್ ಚೇತನ್ ದೋಳ್ತಿಲ, ಸಂಚಾಲಕ್ ಪ್ರವೀಣ್ ರೈ ಮರ್ದೂರು, ರಾಮಣ್ಣ ಜಾಲ್ತಾರು ಪಂಚಾಯತ್ ಸದಸ್ಯರು, ಹವ್ಯಶ್ರೀ ಮಾಲೆಂಗ್ರಿ ದುರ್ಗಾವಾಹಿನಿ ಪ್ರಮುಖ, ಗೀತಾ ಪ್ರವೀಣ್ ಪರ್ಲ ಮಾತೃ ಶಕ್ತಿ ಪ್ರಮುಖ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ