ಸುಳ್ಯ: ಪತ್ರಕರ್ತ, ಲೇಖಕ, ರಾ| ಚಿಂತನ್ ರವರು ಸುಳ್ಯ ಕ್ಕೆ ಭೇಟಿ ‌ನೀಡಿದ್ದಾರೆ. ರವಿ‌ಬೆಳಗೆರೆ ಯವರ ‘ಹಾಯ್ ಬೆಂಗಳೂರ್’, ಲಂಕೇಶ್ ಪತ್ರಿಕೆ, ಸುವರ್ಣ ನ್ಯೂಸ್, ರಾಜ್ ನ್ಯೂಸ್ ಹೀಗೆ ಹತ್ತು ಹಲವು ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ, ‘ರಾ| ಚಿಂತನ್’ ರವರು ಇಂದು ಮಾಡನ್ನೂರಿನ ನೂರುಲ್ ಹುದಾ ಸ್ಟೂಡೆಂಟ್ ಯುನಿಯನ್ ಆಯೋಜಿಸಿದ್ದ ‘ಮೈನಾರಿಟಿ ಪಾಲಿಟಿಕ್ಸ್, ಎತಿಕಲ್ ಜರ್ನಲಿಸಂ’  (Minority Politics, Ethical Journalism) ವಿಷಯದ ಬಗ್ಗೆ, ಕಾರ್ಯಕ್ರಮ ಒಂದರಲ್ಲಿ ಮಾತನಾಡಲು ಆಗಮಿಸಿದ್ದರು. ನಂತರ ಸುಳ್ಯ ದ ಕುರುಂಜಿಭಾಗ್ ನಲ್ಲಿರುವ ಪಟೇಲ್ ಮೊಬೈಲ್, ಟೌನ್ ಕ್ಯೂಬ್ ಕಫೆ ಹಾಗೂ ನಾಕ್ ಸ್ಟುಡಿಯೋಗೆ ಭೇಟಿ‌ ನೀಡಿದ್ದು, ಅಲ್ಲಿ ನೆರದಿಂತಹ ಯುವಕರ ಜೊತೆ ಕೆಲ ಕಾಲ ಸಂವಾದ ನಡೆಸಿದ್ದಾರೆ. ಈ ಸಂಧರ್ಭದಲ್ಲಿ ಸಾಮಾಜಿಕ ಚಿಂತಕರಾದ ಅಬ್ಬಾಸ್ ಸಿ.ಪಿ, ಡ್ಯಾನಿ, ಮಹಬೂಬ್, ಪಟೇಲ್ ಮೊಬೈಲ್ ಮಾಲಕ ರಹಿಮಾನ್, ಸಾದಿಕ್, ನಾಕ್ ಸ್ಟುಡಿಯೋ ಮಾಲಕರಾದಂತಹ ಝುಬೈರ್, ಅಫೀಝ್ ಸುಳ್ಯ, ಟೌನ್ ಕ್ಯೂಬ್ ಮಾಲಕರಾದ ನಿಝಾಮ್, ಆಶಿಕ್, ಹಾಗೂ ಮಿಕ್ದಾದ್, ಅರ್ಫಾತ್, ನಜೀಬ್, ಜಲೀಲ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *