Advertisement
ಸುಳ್ಯ: ಮಾಜಿ ತಹಶೀಲ್ದಾರ್ ಆಗಿದ್ದ ಅನಿತಾಲಕ್ಷ್ಮಿ ಅವರು ಚುನಾವಣೆ ಹಿನ್ನೆಲೆಯಲ್ಲಿ ಸುಳ್ಯದಿಂದ ವರ್ಗಾವಣೆ ಆಗಿದ್ದರು, ಇದೀಗ ಸುಳ್ಯ ತಹಶೀಲ್ದಾರ್ ಆಗಿ ಜಿ.ಮಂಜುನಾಥ ಅವರನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ. ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳ ಕಛೇರಿಯ ಜಾರಿದಳ ವಿಭಾಗದಲ್ಲಿ ತಹಶೀಲ್ದಾರ್ ಆಗಿದ್ದ ಮಂಜುನಾಥ ಅವರನ್ನು ಖಾಲಿ ಇರುವ ಸುಳ್ಯ ತಾಲೂಕು ಗ್ರೇಡ್ 1 ತಹಶೀಲ್ದಾರ್ ಹುದ್ದೆಗೆ ನೇಮಕ ಮಾಡಿ ಸರಕಾರ ಆದೇಶಿಸಿದೆ.
Advertisement