Advertisement


ಅರಣ್ಯ ಇಲಾಖೆ, ಗ್ರಾಮ ಪಂಚಾಯತ್ ಜಂಟಿ ಅಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ತೆಕ್ಕಿಲ್ ಮಾದರಿ ಸಮೂಹ ಸಂಸ್ಥೆಯ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಲಯ ಅರಣ್ಯ ಅಧಿಕಾರಿ ಮಂಜುನಾಥ್ ರವರು ವನಮಹೋತ್ಸವದ ಮಹತ್ವ ಹಾಗೂ ಪರಿಸರ ಜಾಗ್ರತಿ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷರು ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಸದಸ್ಯರುಗಳಾದ ಅಬೂಸಾಲಿ, ಎಸ್. ಕೆ. ಹನೀಫ್, ವಿಮಲಾ ಪ್ರಸಾದ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಉನೈಸ್ ಪೆರಾಜೆ, ತಾಜ್ ಮಹಮ್ಮದ್, ರಹೀಮ್ ಬೀಜದಕಟ್ಟೆ, ಉಮ್ಮರ್ ಹಾಜಿ ,ಹಾರೀಸ್ ಕೆ. ಎಸ್, ಸಾದಿಕ್ ಮಾಸ್ತರ್, ಜಯಾನಂದ ಸಂಪಾಜೆ ಕಾಂತಿ ಬಿ. ಎಸ್, ನೇತ್ರಾವತಿ ಬಂಗ್ಲೆಗುಡ್ಡೆ ,ಉಮೇಶ್ ಕಣಪಿಲ , ಹಾಗು ಶಾಲಾ ಶಿಕ್ಷಕ ವೃ oದ, ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದರು. ಅನಿತಾ ಟೀಚರ್ ಸ್ವಾಗತಿಸಿ ಉಪ ಅರಣ್ಯಅದಿಕಾರಿ ಚಂದ್ರು ವಂದಿಸಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ