Advertisement
ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕಿನ ಹಲವೆಡೆ ಬ್ಯಾನರ್ ಅಳವಡಿಸಲಾಗಿದೆ. “ಹಳ್ಳಿಗೊಂದು ನ್ಯಾಯ ದಿಲ್ಲಿಗೊಂದು ನ್ಯಾಯ ?” , ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗಳಿಗೆ ಶಿಕ್ಷೆ ಇಲ್ಲವೇ ? ೧೧ ವರ್ಷ ಕಳೆದರು ಈ ಬಡ ಹೆಣ್ಣಿನ ಅತ್ಯಾಚಾರ ಮಾಡಿದವರು ಯಾಕೆ ಪತ್ತೆಯಾಗಿಲ್ಲ?, ಪ್ರಜ್ಞಾವಂತ ನಾಗರಿಕರೇ ಎಚ್ಚೆತುಕೊಳ್ಳಿ ಸೌಜನ್ಯ ಳನ್ನು ಅತ್ಯಾಚಾರ ಮಾಡಿ ಕೊಂದು ಮುಗಿಸಿದ ಪಾಪಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿ . ಎಂಬ ಬ್ಯಾನರ್ ಅಳವಡಿಸಲಾಗಿದೆ.
Advertisement