Advertisement
ಜಂಇಯ್ಯತುಲ್ ಫಲಾಹ್ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಬೂಬಕ್ಕರ್ ಅಡ್ಕಾರ್ ಅಡ್ವೋಕೇಟ್, ಮತ್ತು ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಕೆ. ಎಂ. ಮುಸ್ತಫ ಇವರನ್ನು ಮುಡಿಪು ಎಜುಪಾರ್ಕ್ ನಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಅಸ್ಸಯ್ಯದ್ ಅಶ್ರಫ್ ತoಞಳ್ ಅಸ್ಸಖಾಫ್ ಆದೂರ್ ಸನ್ಮಾನ ನೆರವೇರಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ತoಞಳ್ ರವರು ಶಿಕ್ಷಣ ಸಂಸ್ಥೆಗಳಲ್ಲಿ ಸೌಹಾರ್ದ ವಾತಾವರಣ ಕೆಡಿಸುವವರ ವಿರುದ್ದ ಕಠಿಣ ಕ್ರಮ ಜರಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷ ಉಮ್ಮರ್ ಸಖಾಫಿ,ಕಾರ್ಯದರ್ಶಿ ಎಂ. ಬಿ. ಸಖಾಫಿ,ಟಿ. ರ್. ಕನ್ಸಸ್ಟ್ರೈಕ್ಷನ್ ಎಂ ಡಿ. ಖಾದರ್ ಹಾಜಿ, ಮಜ್ಲಿಸ್ ಪದಾಧಿಕಾರಿ ಸಯ್ಯದ್ ಜಲಾಲ್ ತoಞಳ್, ಸಯ್ಯದ್ ಶಫೀಕ್ ತoಞಳ್,ಜಮಾಲುದ್ದೀನ್ ಸಖಾಫಿ ಸಿದ್ದೀಕ್ ಸಖಾಫಿ ಮುಳೂರ್, ಅಡ್ವೋಕೇಟ್ ಇಲ್ಯಾಸ್,ಮೊದಲಾದವರು ಉಪಸ್ಥಿತರಿದ್ದರು
Advertisement