Advertisement
ಸುಳ್ಯ : ಆಗಸ್ಟ್15 ರಂದು ಸಂಜೆ ಪಾಲಡ್ಕ ನದಿಯಲ್ಲಿ ಕಂಡು ಬಂದ ಅಪರಿಚಿತ ಮೃತದೇಹದವನ್ನು, ಪೈಚಾರು ಮುಳುಗು ತಜ್ಞರ ತಂಡ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕ ತೊಡಗಿದ್ದಾರೆ. ಮೃತದೇಹವನ್ನು ಮೇಲೆಕ್ಕೆತ್ತುವ ಈ ಒಂದು ಕಾರ್ಯದಲ್ಲಿ ಬಶೀರ್ ಆರ್ಬಿ ,ಅಬ್ಬಾಸ್ ಶಾಂತಿನಗರ, ಸಿಯಾಬ್ ಬೆಟ್ಟಂಬಾಡಿ, ನೂರುದ್ದೀನ್, ಶರೀಕ್ ಪೈಚಾರ್, ಅಶ್ರಫ್ ಅಚ್ಚಪ್ಪು, ಹಾರಿಸ್ ಸವಾದ್ ಉಪಸ್ಥಿತರಿದ್ದರು.
Advertisement