ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಮಸೀದಿಯಲ್ಲಿ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಸಿರಾಜುಲ್ ಇಸ್ಲಾಂ ಕಮಿಟಿ ಪಳ್ಳಿಮಜಲು ಇದರ ಅಧ್ಯಕ್ಷ ಇಬ್ರಾಹಿಂ ಬೀಡು ಧ್ವಜಾರೋಹಣವನ್ನು ನೆರವೇರಿಸಿದರು. ಸಿರಾಜುಲ್ ಹುದಾ ಮದರಸ ಪಳ್ಳಿಮಜಲು ಇದರ ಸದರ್ ಮುಅಲ್ಲಿಂ ಮಹಮೂದ್ ಸಖಾಫಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮಸೀದಿ ಖತೀಬರಾದ ರಫೀಖ್ ಅಹ್ಸನಿ ಕಿರು ಭಾಷಣ ಹಾಗೂ ದುಆಗೈದರು. ಖೊಮ್ಮಿಟೆ ಪ್ರಧಾನ ಕಾರ್ಯದರ್ಶಿ ಹನೀಫ್ ಸಲಾಲಹ್, ಹಿರಿಯರಾದ ಇಬ್ರಾಹಿಂ, ಸ್ವುಹುಫಿ ಬೀಡು, ಸ್ಥಳೀಯ ಸಂಘಟನಾ ಪ್ರಮುಖರಾದ ಶಂಸುದ್ದೀನ್ ಝಂ ಝಂ, ಅಶ್ರಫ್ ನೇಲ್ಯಮಜಲು, ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆ ಉಪಸ್ಥಿತರಿದ್ದರು.ಮಹಮೂದ್ ಸಖಾಫಿ ಕೃತಜ್ಞತೆ ಸಲ್ಲಿಸಿದರು.ಕೊನೆಗೆ ಸಿಹಿ ವಿತರಿಸಲಾಯಿತು.