Advertisement
ಅರೋಗ್ಯ, ಕುಟುಂಬ ಕಲ್ಯಾಣ ಮತ್ತು ದ. ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ 54 ನೇ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರು ವಿಕಾಸ ಸೌಧ ದಲ್ಲಿರುವ ಸಚಿವರ ಕಚೇರಿಗೆ
ಸಚಿವರುಗಳಾದ ರಹೀಮ್ ಖಾನ್,ರಾಮಲಿಂಗಾ ರೆಡ್ಡಿ, ವಿವಿದ ಇಲಾಖೆಯ ಅಧಿಕಾರಿಗಳು, ಪಕ್ಷದ ಮುಖಂಡರುಗಳು ಮತ್ತು ಅಭಿಮಾನಿಗಳು ಆಗಮಿಸಿ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು
ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಹೂಹಾರ, ಹೂಗುಚ್ಛ, ಬದಲಿಗೆ ಪುಸ್ತಕಗಳನ್ನು ನೀಡಿ ಶುಭಾಶಯ ಕೋರಿದರು
ಈ ಸಂದರ್ಭದಲ್ಲಿ ದ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ, ಕಾರ್ಯದರ್ಶಿ ರಿಯಾಜ್ ಕಣ್ಣೂರ್, ಕ್ರೆಸೆಂಟ್ ಸ್ಕೂಲ್ ಕಾಪು ಆಡಳಿತಾದಿಕಾರಿ ನವಾಬ್ ಹಸನ್ ಗುತ್ತೇದಾರ್, ಶಹೀದ್ ಪಾರೆ, ಮಾಜಿ ಕಾರ್ಯದರ್ಶಿ ಬಿ. ಎ. ನಝೀರ್ ಕೃಷ್ಣಾಪುರ ಮೊದಲಾದವರು ಉಪಸ್ಥಿತರಿದ್ದರು.
Advertisement