ಮಡಪ್ಪಾಡಿಯಿಂದ ಮರ್ಕಂಜ – ದೊಡ್ಡತೋಟ ಮಾರ್ಗವಾಗಿ ಸುಳ್ಯಕ್ಕೆ ಬಸ್ಸು ಸೇವೆ ಪ್ರಾರಂಭವಾಗಿದೆ. ಮಡಪ್ಪಾಡಿ ಗ್ರಾಮ ಪಂಚಾಯಿತಿ ಹಾಗೂ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯವರ ಮೂಲಕ ಮಾಡಿದ ಪ್ರಯತ್ನದ ಫಲವಾಗಿ ಇದೀಗ ಬಸ್ಸು ಸೇವೆಯನ್ನು, ಕರ್ನಾಟಕ ಸಾರಿಗೆ ಇಲಾಖೆ ಆರಂಭಿಸಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮರವರು ತೆಂಗಿನಕಾಯಿ ಒಡೆಯುವುದರ ಮೂಲಕ ನೂತನ ಬಸ್ಸು ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಯ ಸಮಿತಿ ಸದಸ್ಯರುಗಳಾದ ಸೋಮಶೇಖರ ಕೇವಳ, ವಿಜೇಶ್ ಹಿರಿಯಡ್ಕ, ಮುಖಂಡರಾದ ಪಿ. ಸಿ.ಜಯರಾಮ, ಮಿತ್ರದೇವ ಮಡಪ್ಪಾಡಿ ಹಾಗೂ ಗ್ರಾಮಸ್ಥರಾದ ಯತೀಂದ್ರನಾಥ ಪಾಲ್ತಾಡು, ದಿನೇಶ್ ಕೊಡಪಾಲ, ವಾಸುದೇವ ನಡುಬೆಟ್ಟು, ಭೋಜರಾಜ ಪೈಲೂರು, ನಿತ್ಯಾನಂದ ಎನ್.ಟಿ, ಈಶ್ವರ ಬಳ್ಳಡ್ಕ, ಶ್ರೀಮತಿ ವಸಂತಿ ಕೊಡಪಾಲ, ಶ್ರೀಮತಿ ತೇಜಾವತಿ ಕೊಡಿಪಾಲ, ವಿನಯ ನಡುಬೆಟ್ಟು, ಬಾಲಕೃಷ್ಣ ನಡುಬೆಟ್ಟು, ಕುಸುಮಾಧರ ಕಡ್ಯ, ಧರ್ಮಪಾಲ ನಡುಬೆಟ್ಟು, ಜನಾರ್ಧನ ಬಳ್ಳಡ್ಕ ಮೊದಲಾದವರು ಉಪಸ್ಥಿತರಿದ್ದರು.