ಇತ್ತೀಚಿನ ದಿನಗಳಲ್ಲಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನಿ ಸೇನೆಯ ಮೇಲೆ ವಿನಾಶಕಾರಿ ದಾಳಿ ನಡೆಸುತ್ತಿದೆ. ಭಾನುವಾರ ಬಲೂಚ್ ದಂಗೆಕೋರರು ಬಲೂಚಿಸ್ತಾನದ (Balochistan) ನೋಶ್ಕಿಯಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಕನಿಷ್ಠ 90 ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲೆ ಮಜೀದ್ ಬ್ರಿಗೇಡ್ ಆತ್ಮಾಹುತಿ ದಾಳಿ ನಡೆಸಿದೆ ಎಂದು ಬಿಎಲ್‌ಎ ಹೇಳಿಕೊಂಡಿದೆ. ಇದಾದ ನಂತರ, ಬಿಎಲ್‌ಎಯ ಫತೇಹ್ ಸ್ಕ್ವಾಡ್ ದಾಳಿ ಮಾಡಿತು, ಇದರಿಂದಾಗಿ ಕೊಲ್ಲಲ್ಪಟ್ಟ ಪಾಕಿಸ್ತಾನಿ ಸೈನಿಕರ ಒಟ್ಟು ಸಂಖ್ಯೆ 90 ಕ್ಕೆ ಏರಿತು. ಈ ಬೆಂಗಾವಲು ಪಡೆಯಲ್ಲಿ ಕ್ವೆಟ್ಟಾದಿಂದ ಟಫ್ತಾನ್‌ಗೆ ಹೋಗುತ್ತಿದ್ದ 7 ಬಸ್‌ಗಳು ಇದ್ದವು. ನಂತರ ಅದನ್ನು ಬಲೂಚಿಸ್ತಾನದ ನೋಶ್ಕಿಯಲ್ಲಿರುವ ಆರ್‌ಸಿಡಿ ಹೆದ್ದಾರಿಯಲ್ಲಿ ಗುರಿಯಾಗಿಸಲಾಯಿತು. ಇನ್ನು ಲಭ್ಯವಿರುವ ಮಾಹಿತಿಯ ಪ್ರಕಾರ, ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲೆ ನಡೆದ ಈ ಆತ್ಮಹತ್ಯಾ ದಾಳಿಯ ನಂತರ, 3 ಪಾಕಿಸ್ತಾನಿ ಹೆಲಿಕಾಪ್ಟರ್‌ಗಳನ್ನು ನೋಷ್ಕಿಗೆ ಕಳುಹಿಸಲಾಗಿದೆ. ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಆಂಬ್ಯುಲೆನ್ಸ್‌ಗಳು ನಿರಂತರವಾಗಿ ಎಫ್‌ಸಿ ಪ್ರಧಾನ ಕಚೇರಿಯ ಕಡೆಗೆ ಧಾವಿಸುತ್ತಿವೆ. ಉಗ್ರರ ಫ್ಯಾಕ್ಟರಿ ಯಾಗಿರುವ ಪಾಕಿಸ್ತಾನಕ್ಕೆ ತುಸು ಕ್ಷಣವು ನೆಮ್ಮದಿ ಸಿಗುತ್ತಿಲ್ಲ ಎನ್ನಬಹುದು. ಅದಕ್ಕೆ ಕೆಲ ದಿನಗಳಿಂದ ನಡೆಯುತ್ತಿರುವ ಘಟನೆಗಳೆ ಸಾಕ್ಷಿ. ಯಾಕೆಂದರೆ ಅಲ್ಲಿ ಯಾವಾಗ ಬಾಂಬ್ ಸ್ಪೋಟವಾಗುತ್ತೊ, ಬಾಂಬ್ ಬ್ಲಾಸ್ಟ್ ಆಗುತ್ತೊ ಎನ್ನುವ ಚಿಂತೆ ಆ ದೇಶದ ಎಲ್ಲರನ್ನು ಕಾಡುತ್ತಿದೆ. ಆದರೆ ಸರ್ಕಾರವನ್ನು ಹೊರತು ಪಡಿಸಿ ಎನ್ನುಬಹುದು. ಯಾಕೆಂದರೆ ಕಳೆದ ಒಂದು ವಾರದಲ್ಲಿ ಎರಡಕ್ಕೂ ಹೆಚ್ಚು ಬಾರಿ ಬಾಂಬ್ ಸ್ಪೋಟ, ಹಲವಾರು ಪ್ರಮುಖ ಭಯೋತ್ಪಾದಕರನ್ನು ಮುಸುಕುಧಾರಿಗಳು ಹತ್ಯೆ ಮಾಡುತ್ತಿರುವುದು, ಇನ್ನು ಇದಕ್ಕೂ ಮುನ್ನ ದೊಡ್ಡ ಮಟ್ಟದಲ್ಲಿ ನಡೆದ ಪಾಕಿಸ್ತಾನದ ಪ್ರಯಾಣಿಕ ರೈಲು ಹೈಜಾಕ್; ಹೀಗೆ ಸಾಲು ಸಾಲು ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದರು, ಪಾಕಿಸ್ತಾನ ಸರ್ಕಾರ ಏನು ತೋಚದೆ ಗಪ್ ಚುಪ್ ಆಗಿ ಸುಮ್ಮನೆ ಇದೇ.

ಆತ್ಮಹತ್ಯಾ ದಾಳಿಕೋರನೊಬ್ಬನಿಂದ ದಾಳಿ

ನೋಶ್ಕಿ ಸ್ಟೇಷನ್ ಹೌಸ್ ಆಫೀಸರ್ (SHO) ಜಫರುಲ್ಲಾ ಸುಮಲಾನಿ ಅವರ ಪ್ರಕಾರ, ಆರಂಭಿಕ ತನಿಖೆಗಳು ಈ ಘಟನೆ ಆತ್ಮಹತ್ಯಾ ದಾಳಿ ಎಂದು ಸೂಚಿಸುತ್ತವೆ ಎಂದು ವರದಿ ಮಾಡಿದ್ದು, ದಾಳಿ ನಡೆದ ಸ್ಥಳದಿಂದ ದೊರೆತ ಪುರಾವೆಗಳ ಪ್ರಕಾರ, ಆತ್ಮಹತ್ಯಾ ದಾಳಿಕೋರನೊಬ್ಬ ಸ್ಫೋಟಕ ತುಂಬಿದ ವಾಹನವನ್ನು ಎಫ್‌ಸಿ ಬೆಂಗಾವಲು ಪಡೆಯೊಳಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಎಸ್‌ಎಚ್‌ಒ ಸುಮಲಾನಿ ಹೇಳಿದ್ದಾರೆ.

ಮುಂದುವರೆದು, ಗಾಯಾಳುಗಳನ್ನು ಎಫ್‌ಸಿ ಕ್ಯಾಂಪ್ ಮತ್ತು ನೋಶ್ಕಿ ಬೋಧನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದ್ದು, ಅಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸಲಾಗಿದ್ದು, ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತು ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಸ್‌ಎಚ್‌ಒ ಸುಮಲಾನಿ ಆತಂಕ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *