ಮುಸ್ತಫ ರವರ ಪ್ರಾಮಾಣಿಕ ಸಮಾಜ ಸೇವೆಗೆ ಸಂದ ಗೌರವ :ನಾಸಿರ್ ಲಕ್ಕಿ ಸ್ಟಾರ್
ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸುಡ ) ಇದರ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರ ದಿಂದ ನೇಮಕ ಗೊಂಡ ಕೆ. ಎಂ. ಮುಸ್ತಫ ರವರನ್ನು ಇಂದು ಮಂಗಳೂರಿನ ಹೀರಾ ಇಂಟರ್ನ್ಯಾಷನಲ್ ಆಡಿಟೋರಿಯಂ ನಲ್ಲಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಪರಿಷತ್ ಅಧ್ಯಕ್ಷ ಯು. ಎಚ್. ಖಾಲಿದ್ ಉಜಿರೆ ವಹಿಸಿದ್ದರು. ಇಫ್ತಾರ್ ಮಹತ್ವ ಮತ್ತು ಆಧ್ಯಾತ್ಮಿಕತೆ ಯ ಬಗ್ಗೆ ಲಿಮ್ರಾ ಎಜು ಪಾರ್ಕ್ ಸಂಚಾಲಕರಾದ ಶೇಖ್ ಮಹಮ್ಮದ್ ಇರ್ಫಾನಿ ಉಪನ್ಯಾಸ ನೀಡಿದರು. ಮುಖ್ಯ ಅತಿಥಿ ಗಳಾಗಿ ಕೆಪಿಸಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಟಿ. ಎಂ. ಶಹೀದ್ ಭಾಗವಹಿಸಿದ್ದರು. ಸನ್ಮಾನಿಸಿ ಮಾತನಾಡಿದ ದ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿ ಸ್ಟಾರ್ ಮಾತನಾಡಿ ಪ್ರಾಮಾಣಿಕ ತೆ ಯಿಂದ ಜನರ ಸಮಸ್ಯೆಗಳಿಗೆ ಜಾತಿ, ಮತ, ಪಕ್ಷ ಭೇದವಿಲ್ಲದೆ ದುಡಿದಾಗ ಸ್ಥಾನಗಳು ತಾನಾಗಿಯೇ ಬರುತ್ತದೆ ಎಂಬುದಕ್ಕೆ ಮುಸ್ತಫ ಉತ್ತಮ ಉದಾಹರಣೆ ಎoದರು. ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಎಂ. ಎಚ್. ಹಾಜಿ, ಬ್ಯಾರಿ ಪರಿಷತ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು, ಖಜಾಂಚಿ ನಿಸಾರ್ ಅಹ್ಮದ್ ಕೋಸ್ಟಲ್, ಮೊದಲಾದವರು ವೇದಿಕೆಯಲ್ಲಿದ್ದರು ಗೌರವಧ್ಯಕ್ಷ ಎಂ. ಸಿ. ಯೂಸುಫ್ ವಕ್ತಾರ ಸ್ವಾಗತಿಸಿ ವಂದಿಸಿದರು.
