ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯುಟ್ಯೂಬರ್ ದೂತ ಸಮೀರ್ ಎಂಡಿ ಹಂಚಿಕೊಂಡಿರುವ ವಿಡಿಯೊ ವೈರಲ್ ಆಗಿದ್ದು, ರಾಜ್ಯದಾದ್ಯಂತ ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದು ಎಲ್ಲರೂ ಆಗ್ರಹಿಸುತ್ತಿದ್ದಾರೆ.

ಧರ್ಮಸ್ಥಳ ಹಾರರ್ ಎಂಬ ಶೀರ್ಷಿಕೆ ಅಡಿಯಲ್ಲಿ ವಿಡಿಯೋ ಹಾಕಿದ್ದು ಪ್ರಕರಣದ ಪಿನ್ ಡು ಪಿನ್ ಮಾಹಿತಿ‌ ಒದಗಿಸಿದ್ದರು, ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿ‌ ಸಖತ್ ವೈರಲ್ ಆಗಿತ್ತು, ಆದರೆ ಇದೀಗ ವಿಡಿಯೋ ಯುಟ್ಯೂಬ್ ನಿಂದ ತನಗರಿಯದೆ ಡಿಲೀಟ್ ಆಗಿದೆ. ಇದನ್ನು ಮಾಡಿಸಿದವರು ಯಾರೆಂದು ಗೊತ್ತು, ಶೀಘ್ರದಲ್ಲೇ ನ್ಯಾಯ ಸಿಗಲಿದೆ ಎಂದು ಸಮೀರ್ ದೂತ ತಿಳಿಸಿದ್ದಾರೆ.

Leave a Reply

Your email address will not be published. Required fields are marked *