ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನ ಪಾಂಡೇಶ್ವರ ಮತ್ತು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪದವಿನಂಗಡಿ ನಿವಾಸಿ ವೈಷ್ಣವ್ (24) ಹಾಗೂ ಪುತ್ತೂರು ನೂಜಿಬಾಳ್ತಿಲ ಬಾಂತಾಜೆ ನಿವಾಸಿ ರಿತೇಶ್ ಪಿ. (22) ಬಂಧಿತ ಆರೋಪಿಗಳು.ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರದ ಕೇಂದ್ರ ಉಪ ವಿಭಾಗದಲ್ಲಿ ರಚಿಸಲ್ಪಟ್ಟ ಆಂಟಿ ಡ್ರಗ್ ಟೀಂ ನ ಅಧಿಕಾರಿ, ಸಿಬ್ಬಂದಿಗಳು ಈ ಇಬ್ಬರು ಆರೋಪಿಗಳನ್ನು ಡಿ.19ರಂದು ಬಂಧಿಸಿದ್ದಾರೆ.ಆರೋಪಿ ವೈಷ್ಣವ್ ಅತ್ತಾವರ ಕಟ್ಟೆಯ ಬಳಿ ಗಾಂಜಾ ಸೇವನೆ ಮಾಡುತ್ತಿದ್ದಾಗ ಹಾಗೂ ಆರೋಪಿ ರಿತೇಶ್ ಪಿ. ಕೊಟ್ಟಾರ ಚೌಕಿ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಬಂಧಿಸಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ