ಸುಳ್ಯ ಅನ್ಸಾರಿಯ ಸಂಸ್ಥೆಯಲ್ಲಿ ಸುದೀರ್ಘ 14 ವರ್ಷ ಗಳ  ಕಾಲ ಸೇವೆ ಸಲ್ಲಿಸಿ ನಿರ್ಗಸುತಗತಿರುವ ಉಮ್ಮರ್ ಮುಸ್ಲಿಯಾರ್ ಮರ್ಧಾಳ ರವರಿಗೆ ವಿವಿಧ ಸಂಘ ಸಂಸ್ಥೆ ಗಳ ಪದಾಧಿಕಾರಿಗಳಿಂದ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ಉಮ್ಮರ್ ಉಸ್ತಾದ್ ರವರ ನಿಷ್ಕಳಂಕ ಸೇವೆ, ಅನ್ಸಾರಿಯಾದ ಬೆಳವಣಿಗೆಯಲ್ಲಿ ಮಹತ್ತರ ಸೇವೆ ಶ್ಲಾಘನೀಯ : ಕೆ. ಎಂ. ಮುಸ್ತಫ

ಅನ್ಸಾರಿಯ ಸಂಸ್ಥೆ ಯಲ್ಲಿ ಸ್ವಲಾತ್ ಆಧ್ಯಾತ್ಮಿಕ ಮಜ್ಲಿಸ್ ನೇತೃತ್ವವಹಿಸಿ ನೂರಾರು ಜನರಿಗೆ ಜಾತಿ, ಮತ ಭೇದವಿಲ್ಲದೆ ಜನರ ಕಷ್ಟ ಕಾರ್ಪಣ್ಯ ಗಳಿಗೆ ಪ್ರಾರ್ಥನಾ ಸಂಗಮದ ಮೂಲಕ ಪರಿಹಾರ ಕಲ್ಪಿಸಿ ಜನಪ್ರಿಯರಾಗಿಯಾಗಿದ್ದ, ಅನ್ಸಾರಿಯ ಜುಮ್ಮಾ ಮಸ್ಜಿದ್ ಖತೀಬರಾಗಿ14 ವರ್ಷ ಸೇವೆ ಸಲ್ಲಿಸಿ ನಿರ್ಗಮಿಸುತ್ತಿರುವ ಉಮ್ಮರ್ ಮುಸ್ಲಿಯಾರ್ ಮರ್ದಾಳ ರವರನ್ನು ವಿವಿಧ ಸಂಘ ಸಂಸ್ಥೆ ಗಳ ಪದಾಧಿಕಾರಿಗಳು ಭೇಟಿ ಮಾಡಿ ಗೌರವಾರ್ಪಣೆ ಸಲ್ಲಿಸಿ ಸುಳ್ಯ ನಾಡಿಗೆ ನೀಡಿದ ಪ್ರಾಮಾಣಿಕ ಸೇವೆಯನ್ನು ಸ್ಮರಿಸಿದರು.


ಈ ಸಂದರ್ಭದಲ್ಲಿ ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಎಸ್. ಸಂಶುದ್ದೀನ್, ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಉಪಾಧ್ಯಕ್ಷ ಕೆ. ಎಂ. ಮುಸ್ತಫ, ಜಮ್ಮೀಯತುಲ್ ಫಲಾಹ್ ಕಾರ್ಯದರ್ಶಿ ಅಡ್ವೋಕೇಟ್ ಮೂಸ ಪೈoಬಚ್ಚಾಲ್, ಅನ್ಸಾರ್ ನಿರ್ದೇಶಕ ಕೆ. ಬಿ. ಇಬ್ರಾಹಿಂ ಮೊದಲಾವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ