ಸುಳ್ಯ: ಸತ್ಯಜಿತ್ ಸುರತ್ಕಲ್ ಇಂದು ಸುಳ್ಯಕ್ಕೆ ಭೇಟಿ ನೀಡಿದ್ದಾರೆ. ಕೊಡಗು ಜಿಲ್ಲೆಗೆ ಹೋಗುತ್ತಿದ್ದ ಸಂಧರ್ಭದಲ್ಲಿ ಸುಳ್ಯ, ಗಾಂಧಿನಗರದಲ್ಲಿರುವ ಕಲ್ಕುಡ ದೇವಸ್ಥಾನಕ್ಕೆ ಭೇಟಿ ನೀಡಿದರು. ಸತ್ಯಜಿತ್ ರವರನ್ನು ಅವರ ಅಭಿಮಾನಿಗಳಾದ ಶಿವಾನಂದ ಪೂಜಾರಿ, ದಿನೇಶ್ ವರ್ಷ, ಅಮೃತ್ ರಾಜ್ ಮೊದಲಾದವರು ಬರಮಾಡಿಕೊಂಡರು. ಅಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೈವಸ್ಥಾನಕ್ಕೆ ಬಂದಿದ್ದ ಬಿಜೆಪಿ ಹಿರಿಯ ನಾಯಕ ಎನ್.ಎ. ರಾಮಚಂದ್ರ, ಕಲ್ಕುಡ ದೈವಸ್ಥಾನದ ಅಧ್ಯಕ್ಷ ಪಿ.ಕೆ.ಉಮೇಶ್, ಸೋಮನಾಥ ಪೂಜಾರಿ, ಗಿರೀಶ್ ಕಲ್ಲುಗದ್ದೆ ಮೊದಲಾದವರೊಂದಿಗೆ ಕುಳಿತು ಕೆಲ ಹೊತ್ತು ಕುಶಲೋಪರಿ ಮಾತನಾಡಿ ತೆರಳಿದರು.

Leave a Reply

Your email address will not be published. Required fields are marked *