ಸುಳ್ಯ: ಇಲ್ಲಿನ ಸಂಪಾಜೆ ಸಮೀಪ ಸೆಂಟ್ರೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಮೋರಿಗೆ ಡಿಕ್ಕಿ ಹೊಡೆದ ಘಟನೆ ಮಾ.೧೦, ರಾತ್ರಿ 1:45 ರ ಸಮಯ ನಡೆದಿದೆ. ಮೂಲತಃ ಮಂಡ್ಯ ಮೂಲದವರಾಗಿದ್ದ ಚಾಲಕ ಅರುಣ್, ಪತ್ನಿ ಹೇಮಾವತಿ, ಮಗ ಲಿಖಿತ್, ಮಗಳು ಲಾಸ್ಯ, ಇವರಲ್ಲಿ ಹೇಮಾವತಿ ಹಾಗೂ ಮಗ ಲಿಖಿತ್ ಗೆ ಗಾಯಾಗಳಾಗಿವೆ. ಅಪಘಾತ ಸಂಭವಿಸಿ ಮಧ್ಯ ರಾತ್ರಿ ಯಾರು ಇಲ್ಲದೆ ಪರದಾಡುತ್ತಿದ್ದರು. ಈ ಸಮಯದಲ್ಲಿ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸುಳ್ಯ ಪರಿಸರದ ನಾಸಿರ್ ಬಾರ್ಪಣೆ, ಸಾದಿಕ್ ಹಾಗೂ ಗೆಳೆಯರು, ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ತಮ್ಮ ಕಾರಿನ ಮೂಲಕ ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.