ಏ.08: ಶಾಂತಿನಗರ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಪ್ರವೇಶ ದ್ವಾರದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟನಾ ಕಾರ್ಯಕ್ರಮವನ್ನು SDMC ಅಧ್ಯಕ್ಷರಾದ ಶ್ರೀ ಮಹಮ್ಮದ್ ನಝೀರ್ ರವರು ನೆರವೇರಿಸಿದರು ಹಾಗೂ ಹಿರಿಯರಾದ ಶ್ರೀಯುತ ಗೋಪಾಲಕೃಷ್ಣ ಭಟ್ ಇವರು ಉದ್ಘಾಟನೆಗೆ ಕೈಜೋಡಿಸಿದರು.
ಉದ್ಘಾಟನೆ ಮಾಡಿ ಮಾತನಾಡಿದ ಶ್ರೀಯುತ ನಝೀರ್ ರವರು ಈ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾ ಕಂಡ ಕನಸುಗಳು ನನಸಾಗುತ್ತಿದೆ. ನಮ್ಮ ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲು ನಾವು ಸದಾ ಪ್ರಯತ್ನಿಸುತ್ತೇವೆ ಎಂದರು. ಶಾಲೆಯ ಪ್ರವೇಶ ದ್ವಾರದ ಮಹಾದಾನಿಯಾದ ಶ್ರೀಯುತ ರಘುನಾಥ ಯು ದೈಹಿಕ ಶಿಕ್ಷಣ ಶಿಕ್ಷಕರು ಶಾಂತಿನಗರ ಇವರು ಮಾತನಾಡಿ, ಪ್ರವೇಶ ದ್ವಾರದ ಕೊಡುಗೆ ನೀಡಲು ಪ್ರೇರೇಪಣೆ ನೀಡಿದವರ ಬಗ್ಗೆ, ಹಾಗೂ ಕೊಡುಗೆಯಾಗಿ ನೀಡಬೇಕೆಂದು ಮನಸ್ಸಿಗೆ ಹೊಳೆಯಲು ಕಾರಣವಾದ ಅಂಶಗಳ ಬಗ್ಗೆ ಮಾತನಾಡಿದರು. ನಗರ ಪಂಚಾಯಿತಿಯ ಸದಸ್ಯರಾದ ಹಾಗೂ ನಮ್ಮ ವಾರ್ಡಿನ ಪ್ರಥಮ ಪ್ರಜೆಯಾದ ಶ್ರೀಯುತ ನಾರಾಯಣ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮುದಾಯದತ್ತ ಶಾಲಾ ಕಾರ್ಯಕ್ರಮದ ವೀಕ್ಷಕರಾಗಿ ಆಗಮಿಸಿದ ಊರಿನವರೇ ಆದ ಡಾಕ್ಟರ್ ಸುಂದರ ಕೇನಾಜೆ ರವರು ಕೊಡುವ ಮಹಾಗುಣ ಶ್ರೇಷ್ಠವಾದದ್ದು ಎಂದು ಮಹಾದಾನಿಯಾದ ರಘುನಾಥ ಯು ರವರನ್ನು ಅಭಿನಂದಿಸಿದರು. ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಳಿಕ ಸುಳ್ಯ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ ಕೆ ರವರು ಮಾತನಾಡಿ ಶುಭ ಹಾರೈಸಿದರು. ಧರ್ಮರಕ್ಷಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಭಟ್ ರವರು ಮಾತನಾಡಿ ಇಷ್ಟೊಂದು ದೊಡ್ಡ ಮೊತ್ತದ ಕೊಡುಗೆಯನ್ನು ನೀಡಿದ ಶ್ರೀಯುತ ರಘುನಾಥ ಯು ರವರ ಬಗ್ಗೆ ಹಾಗೂ ಈ ಪ್ರವೇಶ ದ್ವಾರದ ನಿರ್ಮಾಣಕ್ಕೆ ಕೈಜೋಡಿಸಿದ SDMC ಯವರ ಸಾಧನೆಯ ಬಗ್ಗೆ ಹೊಗಳಿಕೆಯ ಮಾತನ್ನು ಅಡಿ ಶಾಲೆಯಲ್ಲಿ ನಡೆಯಬೇಕಾದ ಎಲ್ಲಾ ಚಟುವಟಿಕೆಗಳಿಗೂ ಸುಸೂತ್ರವಾಗಿ ಜರಗಲಿ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ದೀಪಾಂಜಲಿ ಮಹಿಳಾ ಮಂಡಲದ ಸ್ಥಾಪಕ ಅಧ್ಯಕ್ಷ ರಾದ ಹರ್ಷ ಕರುಣಾಕರ, SDMC ಯ ಸರ್ವ ಸದಸ್ಯರು, ವಿದ್ಯಾಭಿಮಾನಿಗಳು ಪೋಷಕರು, ಶಿಕ್ಷಕ ವೃಂದ ವಿದ್ಯಾರ್ಥಿವೃಂದ, ಆರೋಗ್ಯ ಕಾರ್ಯಕರ್ತೆ , ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಪ್ರಭಾರ ಮುಖ್ಯ ಗುರುಗಳಾದ ಶ್ರೀಮತಿ ಪವಿತ್ರ ರವರು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು . ಶ್ರೀಮತಿ ಭಾಗ್ಯಶ್ರೀ ರವರು ಕಾರ್ಯಕ್ರಮ ನಿರೂಪಿಸಿ ಸರ್ವರಿಗೂ ವಂದನೆಯನ್ನು ಇತ್ತರು. ಕಾರ್ಯಕ್ರಮಕ್ಕೆ ಪೋಷಕ ವೃಂದ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿವೃಂದ ಸಂಪೂರ್ಣ ಸಹಕಾರವಿತ್ತರು.
