ಸುಳ್ಯ ಪ್ರೆಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಸುದ್ದಿ ಬಿಡುಗಡೆ ವರದಿಗಾರ ಶರೀಫ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ವಾರ್ತಾ ಭಾರತಿ ವರದಿಗಾರ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಸುದ್ದಿ ಬಿಡುಗಡೆ ವರದಿಗಾರ ಈಶ್ವರ ವಾರಣಾಶಿ ಅವಿರೋಧವಾಗಿ ಆಯ್ಕೆಯಾದರು. ಎ.10ರಂದು ನಡೆದ ಸುಳ್ಯ ಪ್ರೆಸ್ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಹಾಸಭೆಯು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳರ ಅಧ್ಯಕ್ಷತೆಯಲ್ಲಿ ನಡೆಯಿತು.

ವಾರ್ಷಿಕ ವರದಿ, ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ವಿ4 ಚಾನೆಲ್ ನ ಪುಷ್ಪರಾಜ್ ಶೆಟ್ಟಿ ಜತೆ ಕಾರ್ಯದರ್ಶಿಯಾಗಿ ಸುದ್ದಿಬಿಡುಗಡೆ ವರದಿಗಾರ ಹಸೈನಾರ್ ಜಯನಗರ, ನಿರ್ದೇಶಕರುಗಳಾಗಿ ಸುದ್ದಿ ಬಿಡುಗಡೆ ಪತ್ರಿಕೆ ಸಂಪಾದಕ ಹರೀಶ್ ಬಂಟ್ವಾಳ್, ಪ್ರಜಾವಾಣಿ ಪತ್ರಿಕೆ ವರದಿಗಾರ ಲೋಕೇಶ್ ಪೆರ್ಲಂಪಾಡಿ, ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷೆ, ಸುದ್ದಿ ಉದ್ಯೋಗಿ ಜಯಶ್ರೀ ಕೊಯಿಂಗೋಡಿ, ಸುಳ್ಯ ಮಿರರ್ ವೆಬ್ ಸಂಪಾದಕ ಗಂಗಾಧರ ಕಲ್ಲಪಳ್ಳಿ, ನ್ಯೂಸ್ ನಾಟ್ ಔಟ್ ವೆಬ್ ಸಂಪಾದಕ ಹೇಮಂತ್ ಸಂಪಾಜೆ, ನ್ಯೂಸ್ ರೂಮ್ 1 ಕನ್ನಡ ವೆವ್ ಸಂಪಾದಕ ಸತೀಶ್ ಹೊದ್ದೆಟ್ಟಿ ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಸುದ್ದಿ ಬಿಡುಗಡೆ ಜಾಹಿರಾತು ವಿಭಾಗದ ಮುಖ್ಯಸ್ತ ರಮೇಶ್ ನೀರಬಿದಿರೆ ಆಯ್ಕೆಯಾದರು. ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ರಮೇಶ್ ನೀರಬಿದಿರೆ ಲೆಕ್ಕಪತ್ರ ಮಂಡಿಸಿದರು.

