ಜಿಲ್ಲೆಯಲ್ಲಿ ಕೋಮು ಸಾಮರಸ್ಯ, ಶಾಂತಿ ಸ್ಥಾಪಿಸಲು ಕ್ರಮಕ್ಕೆ ಆಗ್ರಹ
ಮಂಗಳೂರು: ಜಿಲ್ಲೆ ಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣಗಳು ಜಿಲ್ಲೆಯ ಶಾಂತಿಯನ್ನು ಕದಡುತ್ತಿದ್ದು, ದ. ಕ. ಜಿಲ್ಲೆ ಶಾಂತಿ ಪ್ರಿಯ ಜಿಲ್ಲೆಯಾಗಿದ್ದರೂ ಆಗಾಗ ಅಹಿತಕರ ಘಟನೆಗಳು ನಡೆಯುತ್ತಿದ್ದು ಇದು ಜಿಲ್ಲೆಯ ಜನರ ದೈನಂದಿನ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಇದನ್ನು ಸಮರ್ಪಕವಾಗಿ ನಿಭಾಯಿಸಬೇಕಾದ ಜವಾಬ್ದಾರಿ ಸರ್ಕಾರ ಮತ್ತು ಪಕ್ಷದ ಮೇಲಿದೆ, ಇತ್ತೀಚೆಗೆ ಬಂಟ್ವಾಳ ದಲ್ಲಿ ರಹೀo ಹತ್ಯೆಯ ನಂತರ ಪಕ್ಷದಲ್ಲಿ ಆಂತರಿಕ ಸಂಚಲನ ಉಂಟಾಗಿ, ಕಾರ್ಯಕರ್ತ ರ ನಡುವೆ ಗೊಂದಲ ಉಂಟಾಗಿರುತ್ತದೆ ಈ ಬಗ್ಗೆ ವರದಿ ನೀಡಲು ನಿವೃತ್ತ ಡಿಸಿಪಿ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಜಿ. ಎ. ಬಾವಾ ನೇತೃತ್ವದಲ್ಲಿ ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ, ಸುಳ್ಯ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ರನ್ನೊಳಗೊಂಡ ಜಿಲ್ಲೆಯ ಪ್ರಮುಖರ ಉಪ ಸಮಿತಿಯನ್ನು ಪಕ್ಷದ ನಿರ್ದೇಶನದಂತೆ ರಚಿಸಲಾಗಿತ್ತು
ಸದ್ರಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಎಐಸಿಸಿ ಕಾರ್ಯದರ್ಶಿ ರಾಜ್ಯ ಸಭಾ ಸದಸ್ಯ, ಸಿಡಬ್ಲ್ಯೂಸಿ ಸದಸ್ಯ ನಾಸಿರ್ ಹುಸೈನ್ ನೇತೃತ್ವದಲ್ಲಿ ರಚಿಸಲಾದ ಕೆಪಿಸಿಸಿ ನಿಯೋಗವು ಜಿಲ್ಲೆಗೆ ಮಂಗಳೂರಿನಲ್ಲಿ ಭೇಟಿಯಾಗಿ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳು, ಕೋಮು ಸಾಮರಸ್ಯ ಮರು ಸ್ಥಾಪಿಸಲು ಕೈಗೊಳ್ಳ ಬೇಕಾದ ಕ್ರಮಗಳ Plans ಚರ್ಚಿಸಿ ಮದ್ಯoತರ ವರದಿಯನ್ನು ಸಲ್ಲಿಸಲಾಯಿತು
ಕೆಪಿಸಿಸಿ ನಿಯೋಗದಲ್ಲಿ ಬೆಂಗಳೂರು ಮಹಾನಗರ ಬಿಬಿಎಂಪಿ ಅಧ್ಯಕ್ಷ, ಶಾಸಕ ಎನ್. ಎ ಹ್ಯಾರಿಸ್, ಮಾಜಿ ಸಚಿವರುಗಳಾದ ಕಿಮ್ಮನೆ ರತ್ನಾಕರ್, ಜಯಪ್ರಕಾಶ್ ಹೆಗ್ಡೆ, ಮತ್ತು ಮಾಜಿ ಸಭಾಪತಿ ವಿ. ಆರ್. ಸುದರ್ಶನ್ ಕಾರ್ಯಾ ಧ್ಯಕ್ಷ ಮಂಜುನಾಥ್ ಭಂಡಾರಿ ಹಾಗೂ ಜಿಲ್ಲೆಯ ನಾಯಕರುಗಳು ಉಪಸ್ಥಿತರಿದ್ದರು