ಸುಳ್ಯ: ಮಳೆಗಾಲ ಬಂದರೆ ಸಾಕು ವಿದ್ಯುತ್ ಸಮಸ್ಯೆ ಅಷ್ಟಿಷ್ಟಲ್ಲ, ಹೀಗೆ ಮೆಸ್ಕಾಂ ಶಾಖಾ ಕಚೇರಿ ಮತ್ತು ಗ್ರಾಹಕರಿಂದ ಆಗಾಗ್ಗೆ ಬರುವ ಫೋನ್ ಕರೆಗಳಿಗೆ ಪ್ರತಿಕ್ರಿಯಿಸಬೇಕಾದ ಮೆಸ್ಕಾಂ ಪವರ್ ಮ್ಯಾನ್ ರವರು ತೀವ್ರ ಮಳೆಗಾಲದಲ್ಲಿ ತಮ್ಮ ಮೊಬೈಲ್ ಫೋನ್ ಗಳು ಹಾಳಾಗುವ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಸಮಸ್ಯೆಯನ್ನು ಮನಗಂಡು ಸುಳ್ಯದ ರಿಂಗರ್ಸ್ ಮೊಬೈಲ್ ಸಂಸ್ಥೆಯ ಮಾಲೀಕರಾದ ಶ್ರೀ ಝಿಯಾದ್ ಕೆರಮೂಲೆ ರವರು ಮೊಬೈಲ್ ಕವರ್ ಗಳನ್ನು ವಿತರಿಸಿ ಮೆಸ್ಕಾಂ ಸಿಬ್ಬಂದಿಗೆ ಬೆಂಬಲ ನೀಡಿದ್ದಾರೆ.

ಇದನ್ನು ಮೆಸ್ಕಾಂ ಇಲಾಖೆಯು ಕೃತಜ್ಞತೆಯಿಂದ ಸ್ವೀಕರಿಸಿದ್ದು, ಈ ಸಹಾಯದಿಂದ ಮಳೆಗಾಲದಲ್ಲಿ ಸಂವಹನ ವ್ಯವಸ್ಥೆ ಸುಗಮವಾಗುವ ನಿರೀಕ್ಷೆಯಿದೆ. ಮೆಸ್ಕಾಂ ಸಿಬ್ಬಂದಿ ಈ ಸಹಕಾರಕ್ಕೆ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ.