ದ.ಕ. ಜಿಲ್ಲಾ. ದಲಿತ್ ಸೇವಾ ಸಮಿತಿ (ರಿ) ವಿಟ್ಲ ಇದರ ಸರ್ವ ಕಾರ್ಯಕರ್ತರ ಪರಿಶ್ರಮದ ಮೂಲಕ ವಿಟ್ಲದಲ್ಲಿ ಮಂಜುರುಗೊಂಡಿರುವ ಅಂಬೇಡ್ಕರ್ ಭವನಕ್ಕೆ ₹75,0000 ಲಕ್ಷ ಅನುದಾನ ಮಂಜೂರು ಮಾಡಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಅಶೋಕ್ ರೈ ಯವರನ್ನು ದಿನಾಂಕ 5/7/2025 ರಂದು ವಿಟ್ಲದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಂಘಟನೆ ಯ ಸುಮಾರು 40 ಮಂದಿ ಕಾರ್ಯಕರ್ತರು ಹೂಗುಚ್ಛ ನೀಡಿ ಶಾಲು ಹೊದಿಸಿ ಭಾರತದ ಸಂವಿಧಾನ ಪುಸ್ತಕ ನೀಡಿ ಗೌರವಿಸಲಾಯಿತು. ಮತ್ತು ಇನ್ನೂ ಹೆಚ್ಚಿನ ಅನುದಾನ ತರಿಸುವಂತೆ ಕೂಡಲೆ ಕಾಮಗಾರಿ ಪ್ರಾರಂಭಿಸುವಂತೆ ಮನವಿ ನೀಡಲಾಯಿತು. ಮಾನ್ಯ ಶಾಸಕರು ಕೂಡ ಸಂಘಟನೆಯ ಸ್ಥಾಪಕಧ್ಯಕ್ಷರಾದ ಬಿ.ಕೆ. ಸೇಸಪ್ಪ ಬೆದ್ರಕಾಡುರವರಿಗೆ ಶಾಲು ಹೊದಿಸಿ ಗೌರವಿಸಿದರು.