ಸುಳ್ಯ: ಇಲ್ಲಿನ ಜಯನಗರದ ಸುರೇಶ್ ಕಾಮತ್ ರವರ ಧರ್ಮಪತ್ನಿ ಶ್ರೀಮತಿ ಸುಭಾಷಿಣಿ ಕಾಮತ್ ರವರು ಅಸೌಖ್ಯದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು.
ಸುಭಾಷಿಣಿಯವರು ಮಂಡೆಕೋಲು ಗ್ರಾಮದ ಶಶಿಧರ ನಾಯಕ್ – ಪದ್ಮಾವತಿ ನಾಯಕ್ ದಂಪತಿಯ ಪುತ್ರಿ. ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರೆನ್ನಲಾಗಿದೆ.
ಮೃತರು ಪತಿ, ತಾಯಿ, ಸಹೋದರ, ಸಹೋದರಿ ಸೇರಿದಂತೆ ಬಂಧು ಮಿತ್ರರನ್ನು ಅಗಲಿದ್ದಾರೆ.


