ರಾಜ್ಯದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಗೆ 112 ತುರ್ತು ಸೇವೆ ನೀಡಲು ಗ್ರಹ ಸಚಿವರ ಆಸಕ್ತಿ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಗ್ರಹ ಸಚಿವ ಪರಮೇಶ್ವರ್ ಅವರಿಗೆ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಅವರು 112 ತುರ್ತು ಸೇವೆಯು, ಬೆಳ್ಳಾರೆ ಮತ್ತು ಸುಳ್ಯ ಕ್ಕೆ ಕೇವಲ ಒಂದೇ ಇರುವುದು. ಇದರಿಂದ ತುರ್ತು ಸಂದರ್ಭದಲ್ಲಿ ಶೀಘ್ರ ಸ್ಪಂದನೆ ಅಸಾಧ್ಯ. ಸುಳ್ಯ ಮತ್ತು ಬೆಳ್ಳಾರೆಗೆ 112 ರ ಪತ್ಯೇಕ ತುರ್ತು ಸೇವೆ ನೀಡಬೇಕು ಎಂದು ಮನವಿ ಮಾಡಿದರು. ಅವರ ಮನವಿಗೆ ಇಂಗಿತ ವ್ಯಕ್ತಪಡಿಸಿದ ಸಚಿವರು, ರಾಜ್ಯಾದ್ಯಂತ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಗೆ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ.


