ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಜುಲೈ 27ರಂದು ಅರಂಬೂರಿನ ಮೂಕಾಂಬಿಕ ಭಜನಾ ಮಂದಿರದಲ್ಲಿ ನಡೆಯಲಿರುವ “ಆಟಿಲಿ ಒಂದ್ ದಿನ” ಕಾರ್ಯಕ್ರಮದ ಆಮಂತ್ರಣ ಪತ್ರ ಅನಾವರಣ ಕಾರ್ಯಕ್ರಮವು ಜುಲೈ 12ರಂದು ಅರಂಬೂರಿನ ಮೂಕಾಂಬಿಕ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗೌಡ ಘಟಕದ ಅಧ್ಯಕ್ಷ ಮನೋಹರ ಅರಂಬೂರು, ಮಹಿಳಾ ಘಟಕದ ಅಧ್ಯಕ್ಷೆ ಡಾ. ಅನುರಾಧಾ ಕುರುಂಜಿ, ಉಪಾಧ್ಯಕ್ಷರಾದ ಕೃಷ್ಣಪ್ಪ ಕೆದಂಬಾಡಿ, ಶ್ರೀಮತಿ ರಾಜೀವಿ, ಕಾರ್ಯದರ್ಶಿಗಳಾದ ಗಂಗಾಧರ ನೆಡ್ಚಿಲ್, ವೇದಾವತಿ ನೆಡ್ಚಿಲ್, ಜತೆ ಕಾರ್ಯದರ್ಶಿ ಶ್ರೀಮತಿ ಕವಿತಾ ಕುಡೆಕಲ್ಲು ಸಲಹೆಗಾರರಾದ ಪಡ್ಪು ಪದ್ಮಯ ಗೌಡ, ವಸಂತ ಅಮೆಚೂರು, ಶ್ರೀಮತಿ ಹಾರಾವತಿ ಕುಡೆಕಲ್ಲು, ಶ್ರೀಮತಿ ಉಷಾ ಚಂದ್ರಶೇಖರ, ಆಲೆಟ್ಟಿ ಗ್ರಾಮ ಸಮಿತಿ ಕಾರ್ಯದರ್ಶಿ ಅಶೋಕ ಪೀಚೆಮನೆ, ಸದಸ್ಯರಾದ ಶ್ರೀಮತಿ ಚಂದ್ರಾವತಿ ಬದಿಕಾನ, ಶ್ರೀಮತಿ ಸುಮನ ನೆಡ್ಚಿಲ್, ತೇಜಸ್ ಚಿದ್ಗಲ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *