ದ್ವಿಚಕ್ರ ವಾಹನ ಸವಾರನೋರ್ವನ ಮೇಲೆ ಕಾಡು ಹಂದಿಯೊಂದು ದಾಳಿ ಮಾಡಿದ ಪರಿಣಾಮ, ಯುಕನೋರ್ವ ಗಾಯಗೊಂಡ ಘಟನೆ ಇಂದು ಮುಂಜಾನೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಧನುಷ್(30) ಗಾಯಗೊಂಡವರು.ಕುಂಬ್ರ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿರುವ ಧನುಷ್ ಎಂದಿನಂತೆ ಇಂದು ಬೆಳಗ್ಗೆ ಸ್ಕೂಟರ್ ನಲ್ಲಿ ಪೆಟ್ರೋಲ್ ಬಂಕ್ ಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕುರುಂಜ ಮಣ್ಣಾಪು ತಲುಪಿದಾಗ ಏಕಾಏಕಿ ಕಾಡು ಹಂದಿಯೊಂದು ಧನುಷ್ ಚಲಾಯಿಸುತ್ತಿದ್ದ ಸ್ಕೂಟರ್ ಮೇಲೆ ಎರಗಿದೆ. ಈ ವೇಳೆ ಧನುಷ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಳಿಕ ಕಾಡುಹಂದಿ ಧನುಷ್ ಮೇಲೆ ಎರಗಿದ್ದು, ಅವರ ಬಲ ಕೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಇದರೊಂದಿಗೆ ಆತನ ಇತರ ದೇಹದ ಭಾಗಗಳಿಗೆ ಗಾಯಗೊಳಿಸಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ತನ್ನ ಟೆಕ್‌ ಪಾರ್ಕ್‌ಗಾಗಿ ಖಾಸಗಿ ಫ್ಲೈಓವರ್‌ ನಿರ್ಮಾಣಕ್ಕೆ ಮುಂದಾದ ಪ್ರೆಸ್ಟೀಜ್‌ ಗ್ರೂಪ್‌!

    ತನ್ನ ಟೆಕ್‌ ಪಾರ್ಕ್‌ಗಾಗಿ ಖಾಸಗಿ ಫ್ಲೈಓವರ್‌ ನಿರ್ಮಾಣಕ್ಕೆ ಮುಂದಾದ ಪ್ರೆಸ್ಟೀಜ್‌ ಗ್ರೂಪ್‌!

    ಉದ್ಯಾನನಗರಿಯ ರಾಜಾಜಿನಗರದಲ್ಲಿ ಲುಲು ಮಾಲ್‌, ಸರ್ಕಾರದ ಅಂಡರ್‌ಪಾಸ್‌ಅನ್ನು ಖಾಸಗಿಯಾಗಿ ಪರಿವರ್ತಿಸಿದ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಅಂಥದ್ದೇ ಸುದ್ದಿ ವರದಿಯಾಗಿದೆ. ಪ್ರೆಸ್ಟೀಜ್ ಗ್ರೂಪ್ ಬೆಂಗಳೂರಿನಲ್ಲಿ 1.5 ಕಿಮೀ ಎತ್ತರದ ಫ್ಲೈಓವರ್ ಅನ್ನು ಪ್ರಾರಂಭಿಸುತ್ತಿದ್ದು, ಇದು ತನ್ನ ಹೊಸ ಟೆಕ್ ಪಾರ್ಕ್ ಅನ್ನು ಹೊರ ವರ್ತುಲ ರಸ್ತೆಗೆ ಸಂಪರ್ಕಿಸುತ್ತದೆ. ಬೆಳ್ಳಂದೂರಿನಲ್ಲಿರುವ ತನ್ನ ನಿರ್ಮಾಣ ಹಂತದಲ್ಲಿರುವ ಟೆಕ್ ಪಾರ್ಕ್ ಅನ್ನು ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ಗೆ ನೇರವಾಗಿ ಸಂಪರ್ಕಿಸುವ 1.5 ಕಿ.ಮೀ. ಎತ್ತರದ ರಸ್ತೆಯನ್ನು ನಿರ್ಮಿಸುವ ಯೋಜನೆಗಳೊಂದಿಗೆ ಪ್ರೆಸ್ಟೀಜ್…


  • ಅತೀ ವೇಗ. 100 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದ ಅನಿಮೇಶ್

    ಅತೀ ವೇಗ. 100 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದ ಅನಿಮೇಶ್

    ಗ್ರೀಸ್‌ನಲ್ಲಿ ನಡೆದ ಡ್ರೋಮಿಯಾ ಅಂತರರಾಷ್ಟ್ರೀಯ ಸ್ಪ್ರಿಂಟ್ ಮತ್ತು ರಿಲೇಸ್ ಸ್ಪರ್ಧೆಯಲ್ಲಿ ಭಾರತದ ಯುವ ಓಟಗಾರ ಅನಿಮೇಶ್ ಕುಜುರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಅಥೆನ್ಸ್‌ನ ಉಪನಗರವಾದ ವಾರಿಯಲ್ಲಿ ನಡೆದ ಈ ಓಟದ ಸ್ಪರ್ಧೆಯಲ್ಲಿ 22 ವರ್ಷದ ಅನಿಮೇಶ್ ಕೇವಲ 10.18 ಸೆಕೆಂಡುಗಳಲ್ಲಿ 100 ಮೀಟರ್ ಕ್ರಮಿಸಿದರು. ಈ ಮೂಲಕ 100 ಮೀಟರ್ ಓಟದಲ್ಲಿ ಅತ್ಯಂತ ವೇಗವಾಗಿ ಓಡಿದ ಭಾರತೀಯ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಗುರಿಂದರ್‌ವೀರ್…


  • ಜಟ್ಟಿಪಳ್ಳ ನಿವಾಸಿಯಾಗಿದ್ದ ‘ಅಬ್ದುಲ್ಲ ಕೆ.ಎಂ’ ನಿಧನ

    ಜಟ್ಟಿಪಳ್ಳ ನಿವಾಸಿಯಾಗಿದ್ದ ‘ಅಬ್ದುಲ್ಲ ಕೆ.ಎಂ’ ನಿಧನ

    ಕಾಸರಗೋಡು: ಸುಳ್ಯ ಜಟ್ಟಿಪಳ್ಳ ನಿವಾಸಿಯಾಗಿದ್ದ, ಜಟ್ಟಿಪಳ್ಳ ಮಸೀದಿ, ಜಟ್ಟಿಪಳ್ಳ ಶಾಲಾ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರು, ಸುಳ್ಯ ಪ್ರೆಸ್‌ ಕ್ಲಬ್ ಅಧ್ಯಕ್ಷರಾದ ಶರೀಫ್ ಜಟ್ಟಿಪಳ್ಳ ಇವರ ಮಾವ (ತಾಯಿಯ ಸಹೋದರ) ಪ್ರಸ್ತುತ ಅಡೂರು ಪಳ್ಳಂಗೋಡು ನಿವಾಸಿ ಅಬ್ದುಲ್ಲಾ ಕೆ ಎಂ ರವರು ಜು. 8 ರಂದು ಕಾಸರಗೋಡು ಇ ಕೆ ನಾಯನಾರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ ಮರಿಯಮ್ಮ, ಗಂಡು ಮಕ್ಕಳಾದ ಬಶೀರ್, ಕಾದರ್, ಸಂಶುದ್ದೀನ್, ಜಾಫರ್ ಅದೇ ರೀತಿ ಹೆಣ್ಣು ಮಕ್ಕಳಾದ…


Leave a Reply

Your email address will not be published. Required fields are marked *