Advertisement

ಪ್ರತಿಷ್ಠಿತ ಪತಂಜಲಿ ಯೋಗ ತರಬೇತಿ ಕೇಂದ್ರ ಬೆಂಗಳೂರು ಇವರು ನಡೆಸಿದ ಯೋಗೋತ್ಸವ 2022 ಇದರಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಯೋಗ ಕಲಾನಿಧಿ ಪ್ರಶಸ್ತಿಗೆ ಆಯ್ಕೆ ಆಗಿದ್ದು ಪತಂಜಲಿ ಯೋಗ ತರಬೇತಿ ಕೇಂದ್ರದ ವತಿಯಿಂದ ನೀಡಿದ ಪ್ರಶಸ್ತಿ ಪತ್ರ ಮತ್ತು ಶಾಶ್ವತ ಫಲಕವನ್ನು ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರು ಇಲ್ಲಿ ಹಸ್ತಾಂತರ ಮಾಡಲಾಯಿತು . ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹರಿಹರೇಶ್ವರ ದೇವಸ್ಥಾನ ಇದರ ಅಧ್ಯಕ್ಷ ಕಿಶೋರ್ ಕುಮಾರ್ ಕುಜುಗೋಡು, ನಿವೃತ್ತ ಸೈನಿಕ ಮಹೇಶ್ ಕೊಪ್ಪತಡ್ಕ, ಡಾ. ರಾಜೇಶ್ವರಿ ಗೌತಮ್ ಮೇರ್ಕಜೆ ಮನೆ, ದಿವ್ಯ ಲಕ್ಷ್ಮಣ ಗೌಡ ದೇವಸ್ಯ ಅವರು ಹಾಗೂ ಅರುಣ್ ಮೇಕೇರಿ, ತುಳಸಿ ಕುಮಾರ್ ಕೊರ್ತ್ಯಡ್ಕ, ಚಂದ್ರಶೇಖರ ಕೋಡೊಂಬು, ಭವಿತ ಕೋಡೊಂಬು,ಪ್ರಶಾಂತ್ ವಾಲ್ತಾಜೆ, ಯೋಗ ಗುರು ಶರತ್ ಮರ್ಗಿಲಡ್ಕ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯ ಮೋಹನ್ ದಾಸ್ ಶಿರಾಜೆ, ಹಾಗೂ ಸರ್ವ ಸದಸ್ಯರು, ಕಲಿಕಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ