ಚೆನ್ನೈ: ಪವಿತ್ರ ರಂಜಾನ್ ಮಾಸದ ಸಂದರ್ಭದಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರು ಮುಸ್ಲಿಂ ಬಾಂಧವರಿಗೆ ಶುಕ್ರವಾರ ಇಫ್ತಾರ್ ಕೂಟ ಆಯೋಜಿಸಿದರು. ರಾಯಪೆಟ್ಟಾ ವೈಎಂಸಿಎ ಕ್ರೀಡಾಂಗಣದಲ್ಲಿ ಇಫ್ತಾರ್ ಕೂಟ ನಡೆದಿದೆ.
ಮುಸ್ಲಿಂ ಟೋಪಿ ಧರಿಸಿ, ಬಿಳಿ ಬಣ್ಣದ ಉಡುಪಿನಲ್ಲಿ ನಮಾಜ್ ಮಾಡಿದ ವಿಜಯ್, ಬಳಿಕ ರೋಜಾ ಉಪವಾಸ ಮುಗಿಸಿದ ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ಜನರೊಂದಿಗೆ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡರು.ವಿಜಯ್ ಅವರ ಫೋಟೋಗಳು ಮತ್ತು ವೀಡಿಯೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.