ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯುಟ್ಯೂಬರ್ ದೂತ ಸಮೀರ್ ಎಂಡಿ ಹಂಚಿಕೊಂಡಿರುವ ವಿಡಿಯೊ ವೈರಲ್ ಆಗಿದ್ದು, ರಾಜ್ಯದಾದ್ಯಂತ ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದು ಎಲ್ಲರೂ ಆಗ್ರಹಿಸುತ್ತಿದ್ದಾರೆ.
ಸಮೀರ್ ತನಿಖಾ ವಿಡಿಯೊ ಇದೀಗ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಆತನ ವಿಡಿಯೊ ಮೂಲಕ ಸೌಜನ್ಯ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಮೀರ್ ಪ್ರಥಮವಾಗಿ ಯುಟ್ಯೂಬ್ ನಲ್ಲಿ ಧರ್ಮಸ್ಥಳ ಹಾರರ್ ಎಂಬ ಶೀರ್ಷಿಕೆಲ್ಲಿ ಹಾಕಿದ್ದ ವಿಡಿಯೋ ದಾಖಲೆಯ ವೀಕ್ಷಣೆ ಸಿಕ್ಕಿತ್ತು. ಒರೋಬ್ಬರಿ 1 ಕೋಟಿ 90 ಲಕ್ಷ ವೀಕ್ಷಣೆ ಸಿಕ್ಕಿತು. ಇದೀಗ ಸಾಕ್ಷಿನಾಶ ಎಂಬ ಎರಡನೇ ವಿಡಿಯೋ ಪೋಸ್ಟ್ ಮಾಡಿದ್ದು ಮಗದೊಂದು ಸೌಜನ್ಯ ಪರವಾಗಿ ವಿಡಿಯೋ ಪೋಸ್ಟ್ ಮಾಡಿದ್ದಾನೆ.
