ಆ18 ರಂದು ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಪೇರಡ್ಕ ಶಾಖೆ ಇದರ ವತಿಯಿಂದ ಮಾಸಿಕ ಮಜ್ಲಿಸ್ ನ್ನೂರ್ ಕಾರ್ಯಕ್ರಮ ಹಾಗೂ ವಯನಾಡ್ ದುರಂತದಲ್ಲಿ ಮಡಿದವರ ಹೆಸರಿನಲ್ಲಿ ಸಾಮೂಹಿಕ ಪ್ರಾರ್ಥನೆ ಸಂಗಮ ನಡೆಯಲಿರುವುದು . ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅರಂತೋಡು ಬದ್ರಿಯಾ ಜಮಾ ಮಸೀದಿ ಖತೀಬ್ ಇಸ್ಮಾಯಿಲ್ ಫೈಝಿ ಗಟ್ಟಿಮನೆ ಆಗಮಿಸಲಿದ್ದಾರೆ.

ಹಾಗೂ ಮಜ್ಲಿಸ್ ನ್ನೂರು ನೇತ್ವತವನ್ನು ಎಂ ಜೆ ಮಸೀದಿ ಖತೀಬ್ ರಾದ ನಹೀಂ ಫೈಝಿ ಉಸ್ತಾದ್ ನಿರ್ವಹಿಸಲಿದ್ದಾರೆ. ಅದ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಮೀದ್ ಮುಸ್ಲಿಯಾರ್ ಹಾಗೂ ಹಾರಿಸ್ ಹಝರಿ ಉಸ್ತಾದ್ ಸೇರಿದಂತೆ ಹಲವಾರು ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಎಂದು ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ. ಹನೀಫ್ ಮೊಟ್ಟಂಗಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *