ಸುಳ್ಯ: ಇಲ್ಲಿನ ಸೈಂಟ್ ಜೋಸೆಫ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕು.ಯುಕ್ತಿ ಯವರು ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೇಶ ದಾನ ಮಾಡಿದ್ದಾರೆ.

ಇವರು ಜಯನಗರ ಮೂಲದ ಶಾಂತಪ್ಪ ಡಿ. ಹಾಗೂ ಹೇಮಾ ದಂಪತಿಯವರ ಪುತ್ರಿಯಾಗಿದ್ದು ಆ 19 ರಂದು ಅವರು ತಮ್ಮ ಕೇಶವನ್ನು ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಸ್ಥಾಪಕ ಉದಯ ಭಾಸ್ಕರ್ ರವರಿಗೆ ಹಸ್ತಾಂತರ ಮಾಡುವ ಮೂಲಕ ಕೇಶ ದಾನ ಮಾಡಿದ್ದಾರೆ.

ಈ ಸಂಸ್ಥೆಯು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ನೇರವಾಗುವ ಉದ್ದೇಶದಿಂದ ಈ ಸೇವೆಯನ್ನು ಮಾಡುತ್ತಿದ್ದು ಅಮೃತ ಬಿಂದು ರಕ್ತ ನಿಧಿ, ಅಮೃತ ದೃಷ್ಟಿ ನೇತ್ರ ಧಾನ, ಅಮೃತ ಕೇಶ ಕೂದಲು ದಾನ ಅಭಿಯಾನ ನಡೆಸುತ್ತಿದೆ.

Leave a Reply

Your email address will not be published. Required fields are marked *