ಸುಳ್ಯ: ಇಲ್ಲಿನ ಜಾಲ್ಸುರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಳುಬೈಲು ಎರಡನೇ ವಾರ್ಡಿನ ಬೊಮ್ಮೇಟ್ಟಿ ಎಂಬಲ್ಲಿ ಕುಡಿಯುವ ನೀರಿನ ಚೇಂಬರ್’ನ್ನು  ಕಿಡಿಕೇಡಿಗಳು ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.  ಬೊಳುಬೈಲಿನ ಬೊಮ್ಮೆಟ್ಟಿ ಎಂಬಲ್ಲಿ ರಾತ್ರಿ ವೇಳೆ ಟ್ಯಾಂಕಿಗೆ ನೀರು ಬರುತ್ತಿಲ್ಲವೆಂದು ವಾಟರ್ ಮ್ಯಾನ್
ಗುರುನಾಥ ಪೈಚಾರ್ ರವರು

ಜಾಲ್ಸುರು ಗ್ರಾಮ ಪಂಚಾಯತ್ ಸದಸ್ಯರಾದ ಮುಜೀಬ್ ಪೈಚಾರ್  ಇವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಪಂದನೆ ನೀಡಿದ ಮುಜೀಬ್ ರವರು ರಾತ್ರೊರಾತ್ರಿ  ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ನಂತರ ಪಂಪ್ ಚಾಲಕರಾದ ಅತ್ಮರಾಮ ಇವರಿಗೆ ಘಟನೆ ಕುರಿತು ತಿಳಿಸಿದ್ದಾರೆ.

Leave a Reply

Your email address will not be published. Required fields are marked *