ಕೇರಳದ ವಯನಾಡಿನಲ್ಲಿ ಹಿಂದೆoದೂ ಕಂಡರಿಯದ ಭೀಕರ ದುರಂತಕ್ಕೆ ಇಡೀ ಜಗತ್ತೇ ಸಹಾಯ ಹಸ್ತ ಚಾಚಿದ್ದು ಸಕಲ ನೆರವಿನೊಂದಿಗೆ ಧಾವಿಸುತ್ತಿರುವ ಈ ಸಂದರ್ಭದಲ್ಲಿ ಮಂಗಳೂರಿನ ಯೇನೆಪೋಯ ಡೀಮ್ಡ್ ಯೂನಿವರ್ಸಿಟಿ ಯವರು ಸಂತ್ರಸ್ತ ಕುಟುಂಬಗಳ ವಿದ್ಯಾಭ್ಯಾಸಕ್ಕೆ 100 ಉಚಿತ ಸೀಟು ಗಳು ಶಿಕ್ಷಣ ದ ಸಂಪೂರ್ಣ ವೆಚ್ಚ ವನ್ನು ಭರಿಸುವ ನಿರ್ದಾರವನ್ನು ಘೋಷಣೆ ಮಾಡಿರುವ ಐತಿಹಾಸಿಕ ನಿರ್ಧಾರ ವನ್ನು ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಅಭಿನಂದನೆ ಸಲ್ಲಿಸಿರುತ್ತಾರೆ.
ಯೇನೆಪೋಯ ಡೀಮ್ಡ್ ಯೂನಿವರ್ಸಿಟಿ ಯ ಉಪ ಕುಲಪತಿ ಯೇನೆಪೋಯ ಅಬ್ದುಲ್ಲ ಕುಂಞಿ, ಮೆಡಿಕಲ್ ಕಾಲೇಜು ಎಂಡಿ ಫರ್ಹಾದ್ ಯೇನೆಪೋಯ, ಕುಲಪತಿ ಡಾ. ವಿಜಯ ಕುಮಾರ್ ರವರ ಈ ಮಾನವೀಯ ಕಾರ್ಯ ಶಾಘನೀಯ, ಸಂತ್ರಸ್ತರ ಅಳಿದುಳಿದವರ ಭವಿಷ್ಯ ವನ್ನು ರೂಪಿಸಿ, ಬದುಕು ಕಟ್ಟಿಕೊಳ್ಳಲು ಇದು ನೆರವಾಗಲಿ ಎಂದು ಆಶಿಸಿದ್ದಾರೆ.

Leave a Reply

Your email address will not be published. Required fields are marked *