Month: July 2024

ವಯನಾಡು ದುರಂತ: 282 ಮೃತ ದೇಹಗಳು ಪತ್ತೆ; ಮುಂಡಕೈಯಲ್ಲಿ ಇನ್ನೂ 250 ಮಂದಿ ನಾಪತ್ತೆ: ಬೆಳಗ್ಗೆ ಶೋಧ ಪುನರಾರಂಭ

ಮೆಪ್ಪಾಡಿ: ವಯನಾಡಿನ ಘೋರ ದುರಂತದ ಭೂಕುಸಿತದಲ್ಲಿ ಈವರೆಗೆ 282 ಮಂದಿ ಸಾವನ್ನಪ್ಪಿದ್ದಾರೆ. 195 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಸುಮಾರು 250 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಮುಂಡಕ್ಕೈ ಮತ್ತು ಚಾಲಿಯಾರ್‌ನಲ್ಲಿ ಇದುವರೆಗೆ 127 ಮೃತದೇಹಗಳು ಪತ್ತೆಯಾಗಿವೆ. ಮುಂಡಕೈಯಲ್ಲಿ ನದಿ…

ದ.ಕ ಜಿಲ್ಲೆಯಲ್ಲಿ ನಿಲ್ಲದ ಮಳೆರಾಯ : ಆ. 01ರಂದು ಶಾಲಾ- ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯದ್ಯಂತ ಮಳೆ ಮುಂದುವರಿದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆ.೧ ರಂದು ಶಾಲಾ- ಕಾಲೇಜುಗಳಿ ರಜೆ ಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಘೋಷಿಸಿದ್ದಾರೆ. ಜಿಲ್ಲೆಯ ಅಂಗನವಾಡಿಯಿಂದ ಪದವಿ ಪೂರ್ವ ಕಾಲೇಜು ತನಕ ಶಿಕ್ಷಣ ಸಂಸ್ಥೆಗಳಿಗೆ ರಜೆಯನ್ನು ಘೋಷಿಸಿದ್ದಾರೆ. ಜು.31 ರಂದು ಮಧ್ಯಾಹ್ನ…

ಶಿರಾಡಿ ಘಾಟ್: ರಾತ್ರಿ ರಸ್ತೆ ಸಂಚಾರ ಸುಗಮವಾದ ನಂತರ ತರಕಾರಿ ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿ- ಲಾರಿ ಚಾಲಕರ ಪಾಡು ಅತೀ ಖೇದಕರ

ಭಾರೀ ಮಳೆಗೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮ ಶಿರಾಡಿ ಘಾಟ್ ಮತ್ತೆ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಶಿರಾಡಿಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಹಲವು ವಾಹನಗಳು…

ಸವಣೂರು: ಮುಳುಗಡೆಯಾದ ತೋಟ- ಕೊಠಡಿ ನಾಶ

ಸುಳ್ಯ: ಸವಣೂರು ಅರೆಲ್ತಾಡಿ ಎಂಬಲ್ಲಿಭಾರಿ ಮಳೆಯಿಂದಾಗಿ ತೋಟಗಳು ಭಾಗಶಃ ಮುಉಗಡೆಯಾಗಿದೆ. ಹಂಝ ಎಂಬುವವರ ಮನೆಯ ಕೊಠಡಿ ನಾಶವಾಗಿದೆ. ಹಾಗೇ ಮನೆ ಸಂಪೂರ್ಣ ಕುಸಿಯುವ ಭೀತಯಲ್ಲಿದೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಸುಳ್ಯ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ; ತಪ್ಪಿದ ಅನಾಹುತ

ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ. ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕೊಯನಾಡಿಗೆ ಹೋಗಬೇಕಿದ್ದ ಬಸ್ ನಲ್ಲಿ ಮೊದಲಿಗೆ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್…

ಕಣ್ಣೀರಿನಲ್ಲಿ ವಯನಾಡು: 167 ಸಾವು, 75 ಮೃತದೇಹಗಳ ಗುರುತು ಪತ್ತೆ

ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಿಂದಾಗಿ ಅಕ್ಷರಶಃ ಸ್ಥಬ್ದವಾಗಿದೆ, ಘೋರ ದುರಂತದಲ್ಲಿ 167 ಸಾವನಪ್ಪಿದ್ದು, 75 ಮೃತದೇಹಗಳ ಗುರುತು ಪತ್ತೆಯಾಗಿದೆ, ಅನೇಕ ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮುಂಡಕೈ ಮತ್ತು ಚುರಲ್ಮಳದಲ್ಲಿ ಭೂಕುಸಿತದಲ್ಲಿ ಅಸುನೀಗಿದವರ…

ದ. ಕ. ಜಿಲ್ಲೆಯ  ಶಾಲಾ- ಪಿಯು ಕಾಲೇಜಿಗೆ ನಾಳೆ (ಜು.31) ರಜೆ ಘೋಷಣೆ

ಮಂಗಳೂರು: ಕರಾವಳಿಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ದ.ಕ ಜಿಲ್ಲಾದ್ಯಂತ ನಾಳೆ (ಜು.31) ಶಾಲಾ- ಪಿಯು ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು (12ನೇ…

ವಯನಾಡು ಭೂಕುಸಿತ- 70 ಕ್ಕೂ ಹೆಚ್ಚು ಸಾವು- ಮೂವರು ವೈದ್ಯಕೀಯ ವಿದ್ಯಾರ್ಥಿಗಳು ನಾಪತ್ತೆ.!

ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪಿ.ಜಿ ವಿದ್ಯಾರ್ಥಿಗಳಾದ ಹೈ-ಟೆಕ್ ಮೆಡಿಕಲ್ ಕಾಲೇಜು ಭುವನೇಶ್ವರದಲ್ಲಿ…

ಮಳೆ ಆರ್ಭಟ: ಇಂದು ಸಂಜೆ ಮೊಗರ್ಪಣೆ ಮದ್ರಸ ರಜೆ

ಮಳೆಯ ಆರ್ಭಟ ಹೆಚ್ಚಾಗಿದ್ದು ಎಲ್ಲಾ ಕಡೆ ಪರಿಸ್ಥಿತಿ ಕೈಮೀರಿದಂತಿದೆ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರೆಡ್ ಅಲೆರ್ಟ್ ಕೂಡಾ ಘೋಷಿಸಿದೆ. ಎಡೆಬಿಡದ ಮಳೆಯ ಹಿನ್ನಲೆಯಲ್ಲಿ ಇಂದು (ಜು.30) ಮೊಗರ್ಪಣೆಯ ಮದ್ರಸ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.

ಶೇಖಮಲೆ ಗುಡ್ಡ ಕುಸಿತ ಸಂಚಾರ ಅಸ್ತವ್ಯಸ್ತ- ಸುಳ್ಯ-ಪುತ್ತೂರು ಸಂಚರಿಸಲು ಬೆಳ್ಳಾರೆ ಮೂಲಕ ಬದಲಿ ಮಾರ್ಗ.!

ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯ, ಕುಂಬ್ರ – ಶೇಖಮಲೆ ಶಾಲೆಯ ಬಳಿ ಗುಡ್ಡ ಕುಸಿತ ಸಂಭವಿಸಿದ್ದು, ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದು ರಸ್ತೆ ತಡೆ ಉಂಟಾಗಿದೆ. ಗುಡ್ಡ ಕುಸಿತದಿಂದಾಗಿ ಈಗಾಗಲೇ 4 ವಿದ್ಯುತ್‌ ಕಂಬಗಳು ನೆಲಕ್ಕುರುಳಿದೆ. ಗುಡ್ಡ ಕುಸಿತ ಮುಂದುವರಿದಿದ್ದು, 2…