ಮಾನಸಿಕ ಅಸ್ವಸ್ಥತೆಯಿಂದಾಗಿ ಅರಂತೋಡು ಮುಖ್ಯಪೇಟೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಕಲ್ಲೆಸುತ್ತಿರುವ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಾರ್ವಜನಿಕರು ಗೂನಡ್ಕ ಬಳಿ ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ವರದಿಯಾಗಿದೆ. ಸುಳ್ಯದಿಂದ ನಡೆದುಕೊಂಡು ಬಂದ ಈ ವ್ಯಕ್ತಿ ಅರಂತೋಡು ಪೇಟೆಯಲ್ಲಿ ರಸ್ತೆಯಲ್ಲಿ ಸಂಚರಿಸುವ ರಿಕ್ಷಾ ಗಳಿಗೆ ವ್ಯಕ್ತಿಗಳಿಗೆ, ಅರಂತೋಡು ಪೇಟೆಯನ್ನು ದಾಟಿ ಪಯಸ್ವಿನಿ ಎಂಟರ್ಪ್ರೈಸಸ್ ಹತ್ತಿರ ಸಾರ್ವಜನಿಕರಿಗೆ ಕಲ್ಲೆಸೆದು ಭಯದ ವಾತಾವರಣ ಸೃಷ್ಟಿಸಿದ್ದು, ಇದನ್ನು ಕಂಡ ಸಾರ್ವಜನಿಕರು ಕಲ್ಲುಗುಂಡಿ ಹೊರ ಠಾಣಾ ಪೊಲೀಸರಿಗೆ ಮಾಹಿತಿಯನ್ನು ನೀಡಿ ಪೊಲೀಸರು ಬಂದ ನಂತರ ಅವನನ್ನು ಕಲ್ಲುಗುಂಡಿ ಕಡೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ವರದಿ: ತಾಜುದ್ದೀನ್ ಅರಂತೋಡು

Leave a Reply

Your email address will not be published. Required fields are marked *