ದ್ವಿಚಕ್ರ ವಾಹನ ಸವಾರನೋರ್ವನ ಮೇಲೆ ಕಾಡು ಹಂದಿಯೊಂದು ದಾಳಿ ಮಾಡಿದ ಪರಿಣಾಮ, ಯುಕನೋರ್ವ ಗಾಯಗೊಂಡ ಘಟನೆ ಇಂದು ಮುಂಜಾನೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಧನುಷ್(30) ಗಾಯಗೊಂಡವರು.ಕುಂಬ್ರ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿರುವ ಧನುಷ್ ಎಂದಿನಂತೆ ಇಂದು ಬೆಳಗ್ಗೆ ಸ್ಕೂಟರ್ ನಲ್ಲಿ ಪೆಟ್ರೋಲ್ ಬಂಕ್ ಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕುರುಂಜ ಮಣ್ಣಾಪು ತಲುಪಿದಾಗ ಏಕಾಏಕಿ ಕಾಡು ಹಂದಿಯೊಂದು ಧನುಷ್ ಚಲಾಯಿಸುತ್ತಿದ್ದ ಸ್ಕೂಟರ್ ಮೇಲೆ ಎರಗಿದೆ. ಈ ವೇಳೆ ಧನುಷ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಳಿಕ ಕಾಡುಹಂದಿ ಧನುಷ್ ಮೇಲೆ ಎರಗಿದ್ದು, ಅವರ ಬಲ ಕೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಇದರೊಂದಿಗೆ ಆತನ ಇತರ ದೇಹದ ಭಾಗಗಳಿಗೆ ಗಾಯಗೊಳಿಸಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಕುರುಡು ಕಾಂಚಾಣ- ಪ್ರಾಪ್ತಿ ಗೌಡ

    ಕುರುಡು ಕಾಂಚಾಣ- ಪ್ರಾಪ್ತಿ ಗೌಡ

    ಅದೊಂದು ಕಾಲವಿತ್ತು.ಅಲ್ಲಿ ಮಾನವೀಯ ಮೌಲ್ಯಗಳಿಗೆ ಸಂಭಂದಗಳಿಗೆ, ಭಾವನೆಗಳಿಗೆ ಬೆಲೆ ಇತ್ತು.ಅಲ್ಲಿ ಮಾನವೀಯತೆಗಿಂತ ಯಾವುದೂ ದೊಡ್ಡದಾಗಿ ಇರಲಿಲ್ಲ. ಆದರೆ ಈಗ ಕಾಲ ಸಂಪೂರ್ಣ ಬದಲಾಗಿದೆ.ಸಂಭಂಧಗಳಿಗೆ, ಭಾವನೆಗಳಿಗೆ ಬೆಲೆಯೇ ಇಲ್ಲವಾಗಿದೆ ಈ ಸ್ವಾರ್ಥ ಪ್ರಪಂಚದಲ್ಲಿ ಸ್ವಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾದರೆ ಇದಕ್ಕೆಲ್ಲಾ ಕಾರಣವೇನು? ಮನುಷ್ಯ ತನ್ನ ಮನುಷ್ಯತ್ವ ವನ್ನೇ ಕಳೆದುಕೊಳ್ಳಲು ಕಾರಣವೇನು? ಮನುಷ್ಯನ ಮನುಷ್ಯತ್ವವನ್ನೇ ಮರೆಸಿದ ಆ ವಸ್ತು ಯಾವುದು? ಬೇರೆ ಯಾವುದೂ ಅಲ್ಲ ಅದು ದುಡ್ಡು.ಈ ದುಡ್ಡು ಎನ್ನುವ ಒಂದು ಕಾಗದದ ಚೂರು ಇಂದು ಮನುಷ್ಯನನನ್ನು ಎಷ್ಟರ ಮಟ್ಟಿಗೆ…


  • ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾದಕ ವಸ್ತು ಬಳಕೆ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ.

    ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾದಕ ವಸ್ತು ಬಳಕೆ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ.

    ದಿನಾಂಕ 24/07/2025 ರಂದು ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಗೂನಡ್ಕ ಇಲ್ಲಿ ‘ಮಾದಕ ವಸ್ತುಗಳ ಬಳಕೆ ನಿಷೇಧ’ ವಿಷಯದ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಷಯದ ಕುರಿತು ನಮ್ಮ ಶಾಲೆಯ ಸಹ ಶಿಕ್ಷಕಿಯಾದ ಆಯಿಷತ್ ಸುನೈನಾ ಇವರು ಮಾತನಾಡುತ್ತ, ಪ್ರಸ್ತುತ ಸಮಾಜದಲ್ಲಿ ಯುವ ಪೀಳಿಗೆ ಮತ್ತು ಅಪ್ರಾಪ್ತ ವಯಸ್ಸಿನ ಶಾಲಾ ಮಕ್ಕಳು ಮಾದಕ ವಸ್ತುವಿನ ಸೇವನೆಗೆ ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಬಲಿಯಾಗುತ್ತಿದ್ದು ಅವರ ಅಮೂಲ್ಯವಾದ ಬದುಕಿನ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ನಾಶಪಡಿಸುವಷ್ಟು ಉಲ್ಬಣಿಸುತ್ತಿದೆ.…


  • ಮಲಯಾಳಂ ರ‍್ಯಾಪರ್ ವೇದನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ವೈದ್ಯೆ

    ಮಲಯಾಳಂ ರ‍್ಯಾಪರ್ ವೇದನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ವೈದ್ಯೆ

    Nammasullia: ಕೊಚ್ಚಿ ಜುಲೈ 31: ಮಲೆಯಾಳಂನ ಖ್ಯಾತ ರ‍್ಯಾಪರ್ ವೇದನ್ ವಿರುದ್ಧ ವೈದ್ಯೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿ ಆಗಸ್ಟ್ 2021 ರಿಂದ ಮಾರ್ಚ್ 2023 ರವರೆಗೆ ಅವರನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ ಎಂದು ವೈದ್ಯೆಯೊಬ್ಬರು ಕೊಚ್ಚಿ ತ್ರಿಕ್ಕಾಕರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೇರಳದ ಕೋಝಿಕ್ಕೋಡ್ ಜಿಲ್ಲೆಯ ವೈದ್ಯೆ ಜುಲೈ 30 ರಂದು ತ್ರಿಕ್ಕಕ್ಕಾರ ಪೊಲೀಸರಿಗೆ ದೂರು ನೀಡಿದ್ದು, ವೇದನ್ ಎಂದೇ ಜನಪ್ರಿಯವಾಗಿರುವ ಹಿರಣ್ ದಾಸ್ ಮುರಳಿ 2021 ರಲ್ಲಿ ತನ್ನ…


Leave a Reply

Your email address will not be published. Required fields are marked *