ದ್ವಿಚಕ್ರ ವಾಹನ ಸವಾರನೋರ್ವನ ಮೇಲೆ ಕಾಡು ಹಂದಿಯೊಂದು ದಾಳಿ ಮಾಡಿದ ಪರಿಣಾಮ, ಯುಕನೋರ್ವ ಗಾಯಗೊಂಡ ಘಟನೆ ಇಂದು ಮುಂಜಾನೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಧನುಷ್(30) ಗಾಯಗೊಂಡವರು.ಕುಂಬ್ರ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿರುವ ಧನುಷ್ ಎಂದಿನಂತೆ ಇಂದು ಬೆಳಗ್ಗೆ ಸ್ಕೂಟರ್ ನಲ್ಲಿ ಪೆಟ್ರೋಲ್ ಬಂಕ್ ಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕುರುಂಜ ಮಣ್ಣಾಪು ತಲುಪಿದಾಗ ಏಕಾಏಕಿ ಕಾಡು ಹಂದಿಯೊಂದು ಧನುಷ್ ಚಲಾಯಿಸುತ್ತಿದ್ದ ಸ್ಕೂಟರ್ ಮೇಲೆ ಎರಗಿದೆ. ಈ ವೇಳೆ ಧನುಷ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಳಿಕ ಕಾಡುಹಂದಿ ಧನುಷ್ ಮೇಲೆ ಎರಗಿದ್ದು, ಅವರ ಬಲ ಕೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಇದರೊಂದಿಗೆ ಆತನ ಇತರ ದೇಹದ ಭಾಗಗಳಿಗೆ ಗಾಯಗೊಳಿಸಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
-
ಸಂಪಾಜೆ ಗೂನಡ್ಕ ತೆಕ್ಕಿಲ್ ಶಾಲಾ ಅಭಿವೃದ್ಧಿ ಬಗ್ಗೆ ಸಮಾಲೋಚನಾ ಸಭೆ

ಗೂನಡ್ಕ ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ, ಇದರ ಅಭಿವೃದ್ಧಿ ಮತ್ತು ಸರ್ವತೋಮುಖ ಬೆಳವಣಿಗೆ ಹಾಗೂ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಉದ್ದೇಶ ಮತ್ತು ದೂರದೃಷ್ಠಿಯಲ್ಲಿ ಇಂದು ಶಾಲಾ ಸಭಾ ಭವನದಲ್ಲಿ ಸಮಾಲೋಚನ ಸಭೆಯನ್ನು ನಡೆಸಲಾಯಿತು.ಈ ಸಭೆಯಲ್ಲಿ ಶಾಲಾ ಸಂಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್, ಅಬ್ದುಲ್ಲಾ ಮಾಸ್ವರ್ (ನಿವೃತ್ತ ಮುಖ್ಯ ಶಿಕ್ಷಕರು, ಅರಂತೋಡು.) ದಾಮೋದರ ಮಾಸ್ವರ್ (ನಿವೃತ್ತ ಮುಖ್ಯ ಶಿಕ್ಷಕರು, ಗೂನಡ್ಕ.) ಸುಮತಿ ಶಕ್ತಿವೇಲು (ಮಾಜಿ ಅಧ್ಯಕ್ಷರು ಗ್ರಾ.ಪ ಸಂಪಾಜೆ.) ಎಸ್ ಕೆ ಹನೀಫ್…
-
ಆರ್ಸಿಬಿ (RCB) ಇದೀಗ ಆದಿತ್ಯ ಬಿರ್ಲಾ ಗ್ರೂಪ್ ಪಾಲು: ಐಪಿಎಲ್ ಇತಿಹಾಸದಲ್ಲಿಯೇ ಬೃಹತ್ ಒಪ್ಪಂದ!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಬಹುದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಆರ್ಸಿಬಿ ಫ್ರಾಂಚೈಸಿಯನ್ನು ‘ಆದಿತ್ಯ ಬಿರ್ಲಾ ಗ್ರೂಪ್’ (Aditya Birla Group) ನೇತೃತ್ವದ ಒಕ್ಕೂಟವು ಬರೋಬ್ಬರಿ $1.78 ಬಿಲಿಯನ್ (ಸುಮಾರು ₹16,700 ಕೋಟಿ) ಮೌಲ್ಯದ ಐತಿಹಾಸಿಕ ಒಪ್ಪಂದದ ಮೂಲಕ ಖರೀದಿಸಿದೆ. ಪ್ರಮುಖ ಅಂಶಗಳು: 2026 ರ ಐಪಿಎಲ್ ಸೀಸನ್ ಶುರುವಾಗುವ ಕೆಲವೇ ದಿನಗಳ ಮುನ್ನ ನಡೆದಿರುವ ಈ ಬೃಹತ್ ಬೆಳವಣಿಗೆಯು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದೇ ವೇಳೆ, ರಾಜಸ್ಥಾನ್ ರಾಯಲ್ಸ್ (RR) ತಂಡ ಕೂಡ…
-
ಅಪಘಾತಗಳ ತಾಣವಾಯ್ತಾ ಬೊಳುಬೈಲು? ಕಾರು-ಲಾರಿ ನಡುವೆ ಮತ್ತೆ ಡಿಕ್ಕಿ, ಓರ್ವ ಮೃತ್ಯು

ಸುಳ್ಯ: ತಾಲೂಕಿನ ಬೊಳುಬೈಲು ಬಳಿ ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಸಾವನಪ್ಪಿರುವ ಘಟನೆ ಇಂದು ವರದಿಯಾಗಿದೆ. ಅಪಘಾತಕ್ಕೆ ನಿಖರವಾದ ಕಾರಣ ಮತ್ತು ಗಾಯಾಳುವಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಸರಣಿ ಅಪಘಾತ – ಸ್ಥಳೀಯರಲ್ಲಿ ಆತಂಕ: ಬೊಳುಬೈಲು ಪ್ರದೇಶವು ಇತ್ತೀಚೆಗೆ ಅಪಘಾತಗಳ ವಲಯವಾಗಿ (ಬ್ಲ್ಯಾಕ್ ಸ್ಪಾಟ್) ಮಾರ್ಪಡುತ್ತಿರುವ ಆತಂಕ ಕಾಡುತ್ತಿದೆ. ಇದೇ ಸ್ಥಳದಲ್ಲಿ ಇತ್ತೀಚೆಗಷ್ಟೇ ಎರಡು-ಮೂರು ಅಪಘಾತಗಳು ಸಂಭವಿಸಿದ್ದು, ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ಭಯ ಮೂಡಿಸಿದೆ.…





