ಕುಂಬರ್ಚೋಡು: ಮುಹಿಯದ್ದೀನ್ ಜುಮಾ ಮಸೀದಿಯ ಜಮಾತ್ ಕಾರ್ಯದರ್ಶಿಯಾಗಿ ಸುದೀರ್ಘ ಏಳು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ, ಎಲ್ಲರ ಆತ್ಮೀಯ ಅಬ್ದುಲ್ ಖಾದರ್ ಅಕ್ಕರೆ (ಕಾದರ್ಚ) ಅವರು ಪವಿತ್ರ ಉಮ್ರಾ ಯಾತ್ರೆಗೆ ತೆರಳುತ್ತಿದ್ದು, ಅವರಿಗೆ ಮಸೀದಿಯಲ್ಲಿ ಬೀಳ್ಕೊಡುಗೆ ನೀಡಲಾಯಿತು.

ಕಳೆದ ಏಳು ವರ್ಷಗಳಿಂದ ಜಮಾತಿನ ಕಾರ್ಯದರ್ಶಿಯಾಗಿ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆ ಮತ್ತು ಜಮಾತಿನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಸಮಾರಂಭದಲ್ಲಿ ಜಮಾತಿನ ಪದಾಧಿಕಾರಿಗಳು, ಸದಸ್ಯರು ಹಾಗೂ ಊರ ಹಿರಿಯರು ಉಪಸ್ಥಿತರಿದ್ದು, ಯಾತ್ರೆ ಸುಖಕರವಾಗಲಿ ಸ್ವೀಕರಿಸಲಿ ಎಂದು ದುವಾ ಮಾಡಿದರು.
