ಇಲ್ಲಿನ ಶಾಂತಿನಗರ ಪೈಚಾರ್ನ ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಇಂದು ಸಂಜೆ ದೈವಸ್ಥಾನದ ಸನ್ನಿಧಿಯಲ್ಲಿ ವಿಧ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು.


ದೈವದ ಕಾಲಾವಧಿ ನೇಮೋತ್ಸವವು ಮುಂಬರುವ ಮಾರ್ಚ್ 14 ರಿಂದ ಆರಂಭಗೊಂಡು, ಮಾರ್ಚ್ 15ರ ಸಂಜೆಯ ತನಕ ಜರಗಲಿದೆ. ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಮುತ್ತಪ್ಪ ತಿರುವಪ್ಪ ದೈವದ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ದೈವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.
ಗಣ್ಯರ ಉಪಸ್ಥಿತಿ:
ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಮಧುಸೂದನ್ ಪಿ.ಎಂ., ಪ್ರಧಾನ ಕಾರ್ಯದರ್ಶಿ ಕೆ.ಕೆ. ಬಾಲಕೃಷ್ಣ, ಮೊಕ್ತೇಸರರಾದ ರಾಮಕೃಷ್ಣ ಎಸ್.ಎನ್.ಎನ್. ಉಪಸ್ಥಿತರಿದ್ದರು.
ಹಾಗೆಯೇ ಉತ್ಸವ ಸಮಿತಿ ಅಧ್ಯಕ್ಷರಾದ ಪೃಥ್ವಿರಾಜ್, ಪ್ರಮುಖರಾದ ದಾಮೋದರ ಮಂಚಿ, ನಾರಾಯಣ ಎಸ್. ಎಂ., ಪ್ರಶಾಂತ್ ಕನ್ನಡಕ, ಸುಂದರ ರೈ, ಗೋಪಾಲ ನಾಯ್ಕ, ಚಂದ್ರಶೇಖರ ನೂಜಾಡಿ, ರಾಮಚಂದ್ರ ನಾಯ್ಕ, ಆನಂದ ಗೌಡ, ಚಿನ್ನಪ್ಪ ಗೌಡ ಹಾಗೂ ಶ್ರೀಮತಿ ರಾಜಶ್ರೀ, ಶ್ರೀಮತಿ ಭಾಗ್ಯಶ್ರೀ ಸೇರಿದಂತೆ ಹಲವು ಗಣ್ಯರು ಮತ್ತು ಊರ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.
