ಮಂಗಳೂರು ಪಡಿ ಮತ್ತು ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಇವರ ಸಹಕಾರದಲ್ಲಿ ಪೋಲೀಸ್ ಇಲಾಖೆಯ ಸಹಬಾಗಿತ್ವದಲ್ಲಿ ವಿವಿಧ ಇಲಾಖೆ ಮತ್ತು ಪುತ್ತೂರಿನ ಸಂಘಸಂಸ್ತೆ ಮೂಲಕ ಓಯಸ್ಸಿಸ್ ಬೆಂಗಳೂರು ಇವರಿಂದ ನಡೆಯುವ ಮಾನವ ಮಾರಾಟ ಮತ್ತು ಕಳ್ಳ ಸಾಗಾಣಿಕೆ ವಿರುದ್ಧ ಜನಜಾಗ್ರತಿ ಕಾರ್ಯಕ್ರಮವು ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ಧಾಣದ ಹತ್ತಿರ ನಡೆಯಿತು.
ಕಾರ್ಯಕ್ರಮದ ಜಾಗ್ರತಿ ಕಾರ್ಯ ತಂಡದಲ್ಲಿ ಸರಿ ಸುಮಾರು 20 ರಷ್ಟು ವಿದ್ಯಾರ್ಥಿಗಳು ಬೀದಿ ನಾಟಕ ಮೂಲಕ ಜಾಗ್ರತಿ ಮೂಡಿಸಿದರು,
ಬಳಿಕ ಬೈಕ್ ರ್ಯಾಲಿ ಮೂಲಕ ಹಲವು ವಿದೇಶಿಗರು ಆಗಮಿಸಿದ್ದರು,
ಕಾರ್ಯಕ್ರಮವನ್ನು ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಬೂಮಾ ರೆಡ್ದಿ ಉದ್ಘಾಟಿಸಿ ಮಾತನಾಡಿ ಇಂತಹಾ ಕಾರ್ಯಕ್ರಮ ಮಾಡೂದರಿಂದ ಜನರು ಸಮಾಜದಲ್ಲಿ ಆಗುವ ತಪ್ಪುಗಳನ್ನ ತಡೆಯಲು ಅನುಕೂಲ ಆಗುತ್ತದೆ ಎಂದರು,
ಜಿಲ್ಲಾ ಜನಜಾಗ್ರತಿ ವೇದಿಕೆಯ ಜಿಲ್ಲಾದ್ಯಕ್ಷರಾದ ಪದ್ಮನಾಭ ಶೆಟ್ಥಿಯವರು ಮಾತನಾಡಿ ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರಗಳು ಇಂತಹಾ ಅನೇಕ ಕಾರ್ಯಕ್ರಮಗಳನ್ನು ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ,ಉತ್ತಮ ಕಾರ್ಯವನ್ನು ಎಲ್ಲಾ ಸಂಘಸಂಸ್ತೆಯನ್ನು ಸೇರಿ ಮಾಡಿದಾಗ ಯಶಸ್ವಿ ಕಾಣುತ್ತದೆ ಎಂದರು,
ಕಾರ್ಯಕ್ರಮದ ವಿವರಣೆಯನ್ನು ಪಡಿ ಮಂಗಳೂರು ಇದರ ಸ್ಥಾಪಕರೂ ಕಾರ್ಯನಿರ್ವಹನಾ ಪಾಲಕರಾದ ರೆನ್ನಿ ಡಿ ಸೋಜ಼ಾ ನಿರ್ವಹಿಸಿದರು,
ಕಾರ್ಯಕ್ರಮದಲ್ಲಿ
ಪುತ್ತೂರು ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜಾನ್ಸನ್ ಡಿ ಸೋಜ಼ಾ,ನಗರ ಠಾಣೆಯ ಎಸ್.ಐ ಆಂಜನೇಯ ರೆಡ್ದಿ,ಮಹಿಳಾ ಠಾಣೆಯ ಎಸ್.ಐ ಸುನೀಲ್ ಕುಮಾರ್,ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲ್ ನ ಅದ್ಯಕ್ಷರಾದ ರೊ ಚಂದ್ರಹಾಸ ರೈ.ಬಿ,
ಮಂಗಳೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಪ್ರೇಮಿ ಪೆರ್ನಾಂಡಿಸ್, ತಾಲೂಕು ಜನ ಜಾಗ್ರತಿ ವೇದಿಕೆ ಅದ್ಯಕ್ಷರಾದ ಲೋಕೇಶ್ ಹೆಗ್ಡೆ,
ಶಿಕ್ಷಣ ಸಂಪನ್ಮೂಲ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ನಯನ ರೈ,
ರೊಟರಿ ಕ್ಲಬ್ ಪುತ್ತೂರು ಸಿಟಿ ಅದ್ಯಕ್ಷರಾದ ರೊ ಉಲ್ಲಾಸ್ ಪೈ ,ಜೆ.ಜೆ.ಬೊರ್ಡ್ ನ ನ್ಯಾಯವಾದಿ ಶಾಹಿರಾ ಬಾನು,ಸ್ಮೇಹ ಸಂಘ ರಿಕ್ಷಾ ಚಾಲಕ ಮಾಲಲ ಸಂಘದ ಅದ್ಯಕ್ಷರಾದ ತಾರನಾಥ ಗೌಡ ಬನ್ನೂರು,
ಉಪಾದ್ಯಕ್ಷ ಶಶೀದರ ಸೀಟಿಗುಡ್ದೆ,ಪಡಿ ಎಡ್ವಕೇಸ್ ಕಸ್ತೂರಿ ಬೊಳ್ವಾರ,ಅಮರ್ ಅಕ್ಬರ್ ಅಂತೋಣಿ ಸಂಘಟನೆಯ ರಜ಼ಾಕ್ ಬಪ್ಪಳಿಗೆ,ಪಡಿ ಸಂಸ್ತೆಯ ನಿರ್ವಾಹಕ ನವೀನ್, ನಗರಸಭಾ ನಾಮ ನಿರ್ದೇಶಿತ ಸದಸ್ಯರಾದ ಶರೀಫ್ ಬಲ್ನಾಡ್,ಸಾಮಾಜಿಕ ಕಾರ್ಯಕರ್ತ ಅಶೋಕ್ ಬಪ್ಪಳಿಗೆ,ಕಾರ್ಯಕ್ರಮದ ಸಂಘಟಲರಾದ ಲೋಕೇಶ್ ಅಲ್ಮುಡ,ಸಂಪನ್ಮೂಲ ಕೇಂದ್ರದ ನ್ಯಾಯಾವಾದಿ ಶ್ರೀಮತಿ ರಾಜೇಶ್ವರಿ,ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳು,ಹಲವು ರಿಕ್ಷಾ ಚಾಲಕರು ಉಪಸ್ತಿತರಿದ್ದರು,
ಸಂಪನ್ಮೂಲ ಕೇಂದ್ರದ ನಿಕಟ ಪೂರ್ವ ಅದ್ಯಕ್ಷರಾದ ನ್ಯಾಯಾವಾದಿ ಶ್ರೀಮತಿ ಹರಿಣಾಕ್ಷಿ ಶೆಟ್ಥಿ ನಿರೂಪಿಸಿದರು,ಸಂಪನ್ಮೂಲ ಕೇಂದ್ರದ ಅದ್ಯಕ್ಷರಾದ ರಫೀಕ್ ದರ್ಬೆ ಸ್ವಾಗತಿಸಿ ,ಕಾರ್ಯದರ್ಶಿ ಶ್ರೀಮತಿ ಸುಂಮಂಗಳಾ ಶೆಣೈ ದನ್ಯವಾದ ಸಮರ್ಪಿಸಿದರು.




