ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಹಿಂದಿ ಸಂಘದ ವತಿಯಿಂದ ಹಿಂದಿ ದಿನಾಚರಣೆಯನ್ನು ಸೆಪ್ಟಂಬರ್ ೨೨ ನೇ ಸೋಮವಾರ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಮುಖ್ಯಸ್ಥರಾದ ಪ್ರೊಫೆಸರ್ ಸಂಜೀವ ಕುದ್ಪಾಜೆ, ಇವರು ದೇಶದಲ್ಲಿ ಹಿಂದಿ ಭಾಷೆಯ ಮಹತ್ವ, ಅವಕಾಶಗಳು ಮತ್ತು ಹೆಚ್ಚಿನ ಉಪಯೊಗಗಳನ್ನು ವಿವರಿಸಿದರು.
ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಮಮ್ತ ಇವರು ಹಿಂದಿ ದಿನಾಚರಣೆ ಕುರಿತು ಮಾತನಾಡಿ ಎಲ್ಲರಿಗೂ ಶುಭಕೋರಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸುಳ್ಯದ ಸರ್ಕಾರಿ ಪದವಿ ಕಾಲೇಜಿನ ಹಿಂದಿ ವಿಭಾಗದ ಪ್ರೊಫೆಸರ್ ಶ್ರೀಯುತ ರಾಮಕೃಷ್ಣ ಕೆ.ಎಸ್. ರವರು ಹಿಂದಿ ಭಾಷೆಯ ಕಲಿಕೆ ಹಾಗು ದೈನಂದಿನ ಜೀವನದಲ್ಲಿ ಹಿಂದಿ ಭಾಷೆಯ ಅಗತ್ಯತೆಯನ್ನು ವಿವರಿಸಿದರು.
ಈ ಕಾರ್ಯಕ್ರಮದ ಮುಂಚಿತವಾಗಿ ಆಸಕ್ತ ವಿದ್ಯಾರ್ಥಿಗಳೆಲ್ಲರಿಗೂ ಹಿಂದಿ ಭಾಷೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ದ್ವಿತೀಯ ಬಿಕಾಂ ನಾ ಪಿ.ತೇಜಶ್ರೀ ಮತ್ತು ತಂಡ ಪ್ರಾರ್ಥಿಸಿ, ದ್ವಿತೀಯ ಬಿ.ಬಿ.ಎ ವಿಭಾಗದ ಅಕ್ಷತ್ ಎ ಐ ಸ್ವಾಗತಿಸಿ, ದ್ವಿತೀಯ ಬಿಕಾಂನ ಹಬ್ಸೀನ ವಂದಿಸಿದರು. ಬಿ ಸಿ ಎ ವಿಭಾಗದ ಆಯಿಷಾತ್ ರಿಧ ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವನ್ನು ಸಮಪನಗೊಳಿಸಸಲಾಯಿತು.

Leave a Reply

Your email address will not be published. Required fields are marked *