ಉಬೈಸ್ ಗೂನಡ್ಕರವರಿಗೆ ಸಿಲ್ವರ್ ಮೆಡಲ್ ಮತ್ತು ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿಯನ್ನು ರಾಮಕೃಷ್ಣ ಮಠದ ಕಾರ್ಯದರ್ಶಿ ಸ್ವಾಮಿ ಅತಿದೇವಾನಂದ ಮಹಾರಾಜ್ ಸ್ವೀಕರಿಸಿದರು ಹಿರಿಯ ಐಎಎಸ್ ಅಧಿಕಾರಿ ರಿತೇಶ್ ಕುಮಾರ್ ಮತ್ತು ಬಿಹಾರದ ಮಾಜಿ ಕಾರ್ಮಿಕ ಸಚಿವ ಸುರೇಂದ್ರ ರಾಂ ಉಪಸ್ಥಿತರಿದ್ದರು.


ಉಬೈಸ್ ಗೂನಡ್ಕ ಅವರು ಯೆನೆಪೋಯಾ ವಿಶ್ವವಿದ್ಯಾಲಯದಲ್ಲಿ ಸಕ್ರಿಯ NSS ಸ್ವಯಂಸೇವಕರಾಗಿ, ಮತ್ತು ತುರ್ತು ರಕ್ತದಾನಿಯಾಗಿ ಹೆಸರು ಮಾಡಿದ್ದಾರೆ. ಯೆನಪೋಯಾ ಕಾಲೇಜಿನ ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿರುವ ಅವರು ರಾಷ್ಟ್ರೀಯ ಶಿಬಿರದಲ್ಲೂ ಭಾಗವಹಿಸಿದ್ದಾರೆ,NSS ಮತ್ತು ಸಾಮಾಜಿಕ ಸೇವೆಯಲ್ಲಿನ ಅವರ ಸಾಧನೆಗಳನ್ನು ಗುರುತಿಸಿ, ಬಿಹಾರ ಸರ್ಕಾರ ಮತ್ತು ಫೇಸ್ ಆಫ್ ಫ್ಯೂಚರ್ ಇಂಡಿಯಾ ಸಂಸ್ಥೆ ಇವರನ್ನು ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿಗೆ ಆಯ್ಕೆ ಮಾಡಿದೆ .
ಪ್ರಸ್ತುತ ಅವರು ಯೆನಪೋಯಾ ವಿಶ್ವವಿದ್ಯಾಲಯದಲ್ಲಿ B.Com ACCA ವಿದ್ಯಾಭ್ಯಾಸ ಮಾಡುತ್ತಿದ್ದಾರೆ NSUI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹುದ್ದೆಯಲ್ಲಿ ಅವರು ಅನೇಕ ಪ್ರತಿಭಟನಗಳಲ್ಲಿ ಭಾಗವಹಿಸಿದ್ದು, ವಿದ್ಯಾರ್ಥಿ ಪರವಾಗಿ ಅನೇಕ ಹೋರಾಟಗಳಲ್ಲಿ ಗುರುತಿಸಿದ್ದಾರೆ,ಉಬೈಸ್ ಅವರು ಕೇವಲ ನಾಯಕತ್ವ ಮತ್ತು ಚಟುವಟಿಕೆಯಲ್ಲಿ ಮಾತ್ರವಲ್ಲದೆ ಶೈಕ್ಷಣಿಕವಾಗಿ ಸಹ ಮಿಂಚಿದ್ದಾರೆ. ಅವರು 10ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿ, 2ನೇ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ ಪದವಿಯಲ್ಲಿ ಉತ್ತಮ ಶ್ರೇಣಿಯನ್ನು ಕಾಯ್ದುಕೊಂಡಿದ್ದಾರೆ,ಇವರು ಗೂನಡ್ಕ ತೆಕ್ಕಿಲ್ ಶಾಲೆಯ ಪ್ರಾಥಮಿಕ ಶಿಕ್ಷಣ ಪಡೆದು ಅರಂತೋಡು ಎನ್ ಎಂ ಶಾಲೆಯ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ. ತಂದೆ ಉಮ್ಮರ್ ಹಾಜಿ ಗೂನಡ್ಕ ಮತ್ತು ತಾಯಿ ಎಂ ಪಿ ರುಖ್ಯಅವರ ಸುಪುತ್ರ.

Leave a Reply

Your email address will not be published. Required fields are marked *