ಕುರುಂಜಿಬಾಗ್ ನಿಲ್ದಾಣ A ಪ್ರಥಮ, ಬಿಎಂಎಸ್ ಪಂಜ ಘಟಕ ದ್ವಿತೀಯ
ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ಇದರ ವತಿಯಿಂದ ತಾಲೂಕಿನ ಎಲ್ಲಾ ಬಿಎಂಎಸ್ ಆಟೋ ಚಾಲಕ ಸದಸ್ಯರಿಗೆ ಕ್ರಿಕೇಟ್ ಪಂದ್ಯಾಕೂಟವು ಡಿ.25 ರಂದು ಪ್ರಥಮ ದರ್ಜೆ ಕಾಲೇಜು ಕೊಡಿಯಾಲ್ ಬೈಲ್ ಕ್ರೀಡಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕಿನ ಸುಬ್ರಮಣ್ಯ, ಜಾಲ್ಸೂರು ಪಂಜ, ಎಡಮಂಗಲ, ಕಲ್ಲುಗುಂಡಿ, ಹರಿಹರ ಹಾಗೂ ನಗರದ ಪ್ರದೇಶದ ಪೈಚಾರ್ ನಿಲ್ದಾಣ, ಶ್ರೀ ರಾಮ್ ಪೇಟೆ, ಗೋಪಿಕಾ ನಿಲ್ದಾಣ, ಬಸ್ ನಿಲ್ದಾಣ, ರಥಬೀದಿ ನಿಲ್ದಾಣ, ಕೆವಿಜಿ ನಿಲ್ದಾಣ, ಗಾಂಧಿನಗರ ಮುಂತಾದ ತಾಲೂಕಿನ ಅನೇಕ ಸದಸ್ಯರು ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದರು. ಕುರುಂಜಿಬಾಗ್ ನಿಲ್ದಾಣ A ಪ್ರಥಮ ಸ್ಥಾನ ಹಾಗೂ ಬಿಎಂಎಸ್ ಪಂಜ ಘಟಕ ದ್ವಿತೀಯ ಸ್ಥಾನ ಪಡೆದುಕೊಂಡರು. ಪಂದ್ಯಾಟವನ್ನು ಸಂಘದ ಹಿತೈಷಿ ಗಳಾದ ಮಧುಸೂದನ್ ಕಸ್ತೂರಿ ಓಡಬಾಯಿ ಇವರು ಉದ್ಘಾಟನೆ ಮಾಡಿದರು.

ಪ್ರಕಾಶ್ ಎಂ ಎಸ್ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ ಕೋಶಾಧಿಕಾರಿ ರವಿ ಎಸ್ ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ ಉಪಾಧ್ಯಕ್ಷರಾದ ಪ್ರಶಾಂತ್ ಭಟ್ ಹರಿಹರ ಘಟಕದ ಅಧ್ಯಕ್ಷರಾದ ಮಧು ಕುಕ್ಕುಜಡ್ಕ, ಸತೀಶ್ ಜಾಲ್ಸೂರು, ಗೋಪಾಲ, ಕಾರ್ಯದರ್ಶಿ ದಿನೇಶ್ ಪಂಜ, ಜೀನತ್ ಚಿಮುಳ್ಳು ಕಲ್ಲುಗುಂಡಿ ಘಟಕದ ಕಾರ್ಯದರ್ಶಿ ವಿನೋದ್ ಸುಬ್ರಮಣ್ಯ ಘಟಕ ದ ಕಾರ್ಯದರ್ಶಿ ಯಾದ ಅಜಿತ್ ನಿರ್ದೇಶಕಾರದ ಜಗದೀಶ್ N R ಭಾಸ್ಕರ್ ಜನಾರ್ದನ ಜಯರಾಮ ಕುಲಾಲ್ ಚಾಮಯ್ಯ ಶಿವಪ್ರಸಾದ ಮಹೇಶ್ ಬಾನು ಪ್ರಕಾಶ್ ಪ್ರಸನ್ನ ಪ್ರದೀಪ ರೋಹಿತ್ ವೇಣುಗೋಪಾಲ ನಾಯರ್ ಶಂಕರ ಉಪಸ್ಥಿತರಿದ್ದರು ವಿಜಯ ಕುಮಾರ್ ಉಬರಡ್ಕ ವಿನೀತ್ ಕೊಲ್ಚಾರ್ ಧನು ಕೆವಿಜಿ ರಕ್ಷಿತ್ ಜಯನಗರ ಬಹಳ ಸುಂದರವಾಗಿ ಮನೋರಂಜನೆ ಮುಖಾಂತರ ವೀಕ್ಷಣೆ ವಿವರಣೆ ನೀಡಿದರು . ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಶಾಂತಿನಗರ ಕ್ರೀಡಾ ಸಂಚಾಲಕರಾದ ಸುರೇಂದ್ರ ಕಾಮತ್ ಜಯನಗರ ಕಾರ್ಯಕ್ರಮ ನಿರ್ವಹಿಸಿದರು. ಮದ್ಯಾಹ್ನ ಎಲ್ಲರಿಗೂ ಭೋಜನದ ಸಂಘದ ವತಿಯಿಂದ ವ್ಯವಸ್ಥೆ ಮಾಡಲಾಯಿತು. ಕುಡಿಯುವ ನೀರಿನ ವ್ಯವಸ್ಥೆಯನ್ನು ವೆಂಕಟ್ರಮಣ ಭಟ್ ನೀಡಿ ಸಹಕರಿಸಿದರು


