
ಶಿಕ್ಷಣ ದೊಂದಿಗೆ ಸಂಸ್ಕಾರ ಮತ್ತು ಕೌಶಲ್ಯ ಪಡೆಯುವುದು ಇಂದಿನ ಅವಶ್ಯಕತೆ : ಬಿ ಇ ಓ ಹರಗಿ
ಸುಳ್ಯ ಗ್ರೀನ್ ವ್ಯೂ ಶಾಲೆಯಲ್ಲಿ ಎಸ್ಸೆಸೆಲ್ಸಿ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಗಳಿಗೆ ಅಭಿನಂದನಾ ಸಮಾರಂಭ ಶಾಲಾ ಸಭಾಂಗಣ ದಲ್ಲಿ ಜರಗಿತು
ಸಂಸ್ಥೆಯ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು
ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಎಸ್. ಹರಗಿ ಯವರು ಮಾತನಾಡಿ ಆಧುನಿಕ ತಂತ್ರಜ್ಞಾನ ದ ಈ ಯುಗದಲ್ಲಿ ಉತ್ತಮ ಅಂಕ ಗಳಿಸುವುದರೊಂದಿಗೆ, ಸಂಸ್ಕಾರ ಮತ್ತು ಕೌಶಲ್ಯ ವನ್ನು ಬೆಳೆಸಬೇಕು ಆಗ ಮಾತ್ರ ಜೀವನದಲ್ಲಿ ಯಶಸ್ವಿ ಆಗಲು ಸಾಧ್ಯ ಎಂದರು
ಶಾಲಾ ಸಂಚಾಲಕ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಪ್ರಾಸ್ತಾವಿಕ ಭಾಷಣ ಮಾಡಿದರು
ವೇದಿಕೆಯಲ್ಲಿ ಪದಾಧಿಕಾರಿಗಳಾದ ಕೆ. ಎಸ್. ಉಮ್ಮರ್, ಶಾಫಿ ಕುತ್ತಾಮೊಟ್ಟೆ, ನಿರ್ದೇಶಕರು ಗಳಾದ ಹಾಜಿ ಅಬ್ದುಲ್ ಹಮೀದ್ ಜನತಾ, ಉಬೈದುಲ್ಲಾ ಸಾಲಿ ಕಟ್ಟೆಕ್ಕಾರ್ಸ್,ನಿಕಟ ಪೂರ್ವ ಸಂಚಾಲಕ ಎಸ್. ಎಂ ಅಬ್ದುಲ್ ಹಮೀದ್,ಮಾಜಿ ಸಂಚಾಲಕ ಕೆ. ಎಂ. ಮುಹಿಯ್ಯದ್ದೀನ್ ಫ್ಯಾನ್ಸಿ
ಮೊದಲಾದವರು ಉಪಸ್ಥಿತರಿದ್ದರು
ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಟಣ ಸ್ವಾಗತಿಸಿದರು
ಶಿಕ್ಷಕಿ ಜಯಂತಿ ವಂದಿಸಿದರು
ಶಿಕ್ಷಕ ರಂಜಿತ್ ವಂದಿಸಿದರು
ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿ ಗಳನ್ನು ಶಿಕ್ಷಕರನ್ನು ಸನ್ಮಾನಿಸಲಾಯಿತು
ಪಠ್ಯ ವಿಷಯದಲ್ಲಿ ನೂರಕ್ಕೆ ನೂರು ಗಳಿಸಿಕೊಟ್ಟ ಶಿಕ್ಷಕರಿಗೆ ವಿಶೇಷ ಪುರಸ್ಕಾರ ನೀಡಲಾಯಿತು







