ಕೋರಿಕಂಡ ಅಂಗನವಾಡಿಗೆ ಕನ್ನಡ ಶಿಕ್ಷಕಿ ನೇಮಕ ಮಾಡುವಂತೆ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಕಾಸರಗೋಡು ಜಿಲ್ಲೆಯ ಆಡೂರು ಬಳಿಯ ಕೋರಿಕಂಡ ಅಂಗನವಾಡಿ ಕೇಂದ್ರಕ್ಕೆ ಕನ್ನಡ ಗೊತ್ತಿರುವ ಶಿಕ್ಷಕಿಯನ್ನು ನೇಮಕ ಮಾಡುವಂತೆ ಹೈಕೋರ್ಟ್ ತೀರ್ಪು ನೀಡಿದೆ. ಕನ್ನಡ ಮಾಧ್ಯಮದ ಈ ಅಂಗನವಾಡಿಗೆ ಕೇರಳ ಸರ್ಕಾರ ಮಲಯಾಳಂ ಶಿಕ್ಷಕಿಯನ್ನು ನೇಮಕ ಮಾಡಿದೆ. ಇದರಿಂದ ಈ ಅಂಗನವಾಡಿ ಪೋಷಕರು, ಅಂಗನವಾಡಿ ಮೇಲುಸ್ತುವಾರಿ ಸಮಿತಿಯವರು (ಎ ಎಲ್ ಎಂ ಎಸ್) ಹೈಕೋರ್ಟ್ ಗೆ ಮೂರು ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಮಲಯಾಳಂ ಶಿಕ್ಷಕಿ ನೇಮಕ ಸರಿಯಲ್ಲ. ತಕ್ಷಣ ಕನ್ನಡ ಶಿಕ್ಷಕಿಯನ್ನು ನೇಮಕ ಮಾಡುವಂತೆ ಆದೇಶ ನೀಡಿದೆ.

Leave a Reply

Your email address will not be published. Required fields are marked *