ಸುಳ್ಯ ಗಾಂಧಿನಗರದಲ್ಲಿರುವ ಗಾಂಧಿ ಪಾರ್ಕ್ ಬಳಿ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ನೇತ್ರತ್ವದಲ್ಲಿ ಎಂ ಎಲ್ ಸಿ ಮಂಜುನಾಥ ಭಂಡಾರಿಯವರ ಅನುದಾನದಲ್ಲಿ ರಿಕ್ಷಾ ಚಾಲಕರ ಅಟೋ ತಂಗುದಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು ಕಾಮಗಾರಿ ಕೊನೆಯ ಹಂತದಲ್ಲಿದೇ, ಇದರ ಉದ್ಘಾಟನೆಯನ್ನು ಗಾಂಧಿಜಯಂತಿ ದಿನದಂದು ನಡೆಸುವ ಚಿಂತಯಲ್ಲಿದೆ ಎಂದು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾವೂರು ವಾರ್ಡ್ ಬೂತ್ ಕಮಿಟಿ ಅಧ್ಯಕ್ಷ ಹನೀಫ್ ಬೀಜಕೊಚ್ಚಿ ಹಾಗೂ ಜಗದೀಶ್ ಕಾಯರ್ತೋಡಿ ಉಪಸ್ಥಿತರಿದ್ದರು.
