
ಅರಂತೋಡು ಮುಖ್ಯ ರಸ್ತೆಯಲ್ಲಿರುವ ಹೋಟೆಲ್ ಫುಡ್ ಪಾಯಿಂಟ್ ಗೆ ಕರಾವಳಿ ಪ್ರಾಧಿಕಾರ ಅಧ್ಯಕ್ಷ ಎಂ ಎ.ಗಫೂರ್ ಭೇಟಿ ನೀಡಿದರು.ಅವರು ದ. ಕ.ಸಂಪಾಜೆಯಲ್ಲಿ ವಿವಿಧ ಅನುದಾನದಲ್ಲಿ ಅನುಷ್ಠಾನ ಗೊಂಡ ಕಾಮಗಾರಿಗಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರು ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿರುವ ಕರೀಂ ಪೈಚಾರ್ ರವರ ಮಾಲಕತ್ವದ ಫುಡ್ ಪಾಯಿಂಟ್ ಗೆ ಭೇಟಿ ನೀಡಿದರು.ಕರೀಂ ಪೈಚಾರ್ ಅವರನ್ನು ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಸುಳ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಶಿಕ್ ಅರಂತೋಡು, ಶರಫು ಅರಂತೋಡು,ಮುನೀರ್ ಪೈಚಾರ್,ಸಮದ್ ಗುಂಡಿ,ನವಾಜ್ ,ಆಸಿಫ್ ,ಮತ್ತು ತಾಜುದ್ದೀನ್ ಅರಂತೋಡು ಉಪಸ್ಥಿತಿರಿದ್ದರು.




