ಸುಳ್ಯ: ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ಶಾಂತಿನಗರ, ಸುಳ್ಯ ಇದರ ವತಿಯಿಂದ ಮೇ 10, 2026ರ ಭಾನುವಾರದಂದು (ಆದಿತ್ಯವಾರ) ‘ಮಾಸಿಕ ಸ್ವಲಾತ್ ಮಜ್ಲಿಸ್’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

​ಈ ಆಧ್ಯಾತ್ಮಿಕ ಮಜ್ಲಿಸ್ ಅಂದು ಸಂಜೆ ಮಗ್ರಿಬ್ ನಮಾಝ್ ಬಳಿಕ ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಜರುಗಲಿದೆ.

ಕಾರ್ಯಕ್ರಮದ ಪ್ರಮುಖ ವಿವರಗಳು:

  • ದುವಾ ಹಾಗೂ ಮುಖ್ಯ ಪ್ರಭಾಷಣ: ಸೆಯ್ಯಿದ್ ಮಶ್ಹೂದ್ ಕೂರತ್ ತಂಙಳ್
  • ಸ್ವಲಾತ್ ನೇತೃತ್ವ: ಬಹುಮಾನ್ಯ ಉಸ್ತಾದ್ ಅಬ್ದುಲ್ ಖಾದರ್ ಸಖಾಫಿ ಅಲ್ ಕಾಮಿಲಿ (ಮುದುಗುಡ) ಹಾಗೂ ಅಹ್ಮದ್ ಶಮೀರ್ ನಈಮಿ
  • ಪ್ರಾಸ್ತಾವಿಕ ಭಾಷಣ: ಬಹುಮಾನ್ಯ ಉಸ್ತಾದ್ ಅಬ್ದುರ್ರಶೀದ್ ಝೈನಿ (ಪೆರಾಜೆ)
  • ಸ್ಥಳ: ನೂರುಲ್ ಇಸ್ಲಾಂ ಮದ್ರಸ ವಠಾರ, ಶಾಂತಿನಗರ

​ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದ್ದು, ಸರ್ವರಿಗೂ ಆತ್ಮೀಯ ಸ್ವಾಗತವನ್ನು ಕೋರಿದೆ.

Leave a Reply

Your email address will not be published. Required fields are marked *